Janataa24 NEWS DESK
15 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಮೇಘನಾ ಹೆಚ್ ಎಸ್.

ತುರುವೇಕೆರೆ: ಪಟ್ಟಣದ ಸರಸ್ವತಿಪುರಂನ ವಾಸಿಯಾದ ಸುಂದರ್ ರಾವ್ ಮತ್ತು ಸುಧಾರಾಣಿ ಇವರ ಪುತ್ರಿಯಾದ ಮೇಘನಾ ಎಚ್ಎಸ್, ಅವರು 2017-18 ನೇ ಇಸವಿಯಲ್ಲಿ , ಎಸ್ ಬಿ ಜಿ ಶಾಲೆಯಲ್ಲಿ ಪಿಯುಸಿ ಸೈನ್ಸ್ ವಿಭಾಗದ ಪರೀಕ್ಷೆಯಲ್ಲಿ ತುರುವೇಕೆರೆ ತಾಲೂಕಿಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿ ಶಾಲೆಗೆ ಕೀರ್ತಿ ತಂದಿದ್ದರು.
ಮುಂದಿನ ವಿದ್ಯಾಭ್ಯಾಸವನ್ನು ಮೈಸೂರಿನ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿ ರಸಾಯನಶಾಸ್ತ್ರದ ಸ್ನಾತಕೋತ್ತರ ಪದವಿಯಲ್ಲಿ 15 ಚಿನ್ನದ ಪದಕ ಮತ್ತು 5 ಬಹುಮಾನವನ್ನು ಪಡೆದು ತಾಲೂಕಿಗೆ ಮತ್ತು ವ್ಯಾಸಂಗ ಮಾಡಿದ ಶಾಲೆಗೆ ಕೀರ್ತಿ ತಂದಿದ್ದಾರೆ.

ಕೀರ್ತಿತಂದ ವಿದ್ಯಾರ್ಥಿ ನಿಗೆ ಶ್ರೀ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮತ್ತು ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ಮಂಜುನಾಥ್ ತುರುವೇಕೆರೆ.
https://www.janataa24.com/landgrabbing-rajkaluve-is-now-a-problem-for-the-encroachers/