Janataa24 NEWS DESK
ಲಕ್ಷಾಂತರ ಕೋಟ್ಯಂತರ ರೂ ವೆಚ್ಚ ಮಾಡಿ ಸರ್ಕಾರಿ ಜಾಗ ಅಥವಾ ರಾಜಕಾಲುವೆ. ಪಾರ್ಕ್ ಒತ್ತುವರಿ ಮಾಡಿರುವ ಮಾಲೀಕರಿಗೆ ಮುಂದೆ ಕಂಟಕವಾಗಿ ಮಾರ್ಪಡುತ್ತದೆಯೇ.

ಪಾವಗಡ: ಪಟ್ಟಣದಲ್ಲಿ ಹಾದು ಹೋಗಿರುವ ರಾಜಕಲುವೆ ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂಬುದಾಗಿ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೊದ ವೀರಲಗುಂದಿ ನರಸಿಂಹಯ್ಯ.
ಪಾವಗಡ ಪಟ್ಟಣ ದಿನೇದಿನೇ ಬೆಳೆಯುತ್ತಿದ್ದು ಪಟ್ಟಣ ಸುತ್ತಲೂ ಇರುವಂತಹ ಜಮೀನು ಮಾಲೀಕರು ಲೇಔಟ್ ಗಳಾಗಿ ಮಾರಾಟಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ದುಬಾರಿ ಬೆಲೆ ಗಿಟ್ಟಿಸಲು ಸ್ವಲ್ಪ ಜಾಗಕ್ಕೆ ಲಕ್ಷಾಂತರ ರು ಬೆಲೆ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಪುರಸಭೆ ಗ್ರಾಮ ಪಂಚಾಯಿತಿಯ ರಾಜಕಾಲುವೆ ಪಾರ್ಕ್ ಸೈಟ್ ಗಳು ಒತ್ತುವರಿಗೆ ಮುಂದಾಗಿದ್ದಾರೆ.
ಪಟ್ಟಣದಲ್ಲಿ ಹಾದುಹೋದ ರಾಜಕಾಲುವೆ ಒತ್ತುವರಿದಾರರಿಗೆ ಈಗ ಕಂಠಕವಾಗಿ ಮಾರ್ಪಟ್ಟಿದೆ.
ರಾಜಕಾಲುವೆ ಹರಿಯುವ ಪ್ರದೇಶದ ವಾರ್ಡ್ಗಳನ್ನು ಸ್ಲಂ ಎಂಬುದಾಗಿ ವಿಂಗಡನೆ ಮಾಡಲಾಗಿದೆಯೇ ?

ಪಟ್ಟಣದಲ್ಲಿ ಪ್ರಭಾವಿಗಳು ರಾಜಕೀಯ ವ್ಯಕ್ತಿಗಳು ಒತ್ತುವರಿದಾರರು ಮಾಡಿರುವ ಲೇಔಟ್ಗಳ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆದೇಶ ಸರ್ಕಾರ ಹಿಂದೆನೇ ಆದೇಶ ಹೊರಡಿಸಿದೆ.
ನಕಲಿ ದಾಖಲೆಗಳನ್ನು ಸೃಷ್ಟಿಸುವಲ್ಲಿ ಸರ್ಕಾರ ಅಧಿಕಾರಿಗಳು ಸಿಬ್ಬಂದಿಗಳು ಶಾಮೀಲಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಲ್ಲಿ ಕೂಡಲೇ ಅಂತವರನ್ನು ಸೇವೆಯಿಂದ ಅಮಾನತು ಪಡಿಸಲು ಕ್ರಮ ಜರುಗಿಸಬೇಕು ಎಂಬುದಾಗಿ ಆದೇಶವೇ ಇದೆ.

ನಕಲಿ ದಾಖಲೆಯನ್ನು ಸೃಷ್ಟಿಯಲ್ಲಿರುವ ಸೃಷ್ಟಿ ಇರುವುದು ಸಾಬೀತು ಆದಲ್ಲಿ ತಕ್ಷಣವೇ ಅಂತವರ ವಿರುದ್ಧ ಕ್ರಿಮಿನಲ್ ಮುಖದ್ದಮೆಗೆ ದಾಖಲಿಸಿ ಎಂಬ ಆದೇಶವೂ ಸಹ ಇದೆ.
ಒತ್ತುವರಿ ತೆರೆವು ಮಾಡಿ ಸರ್ಕಾರದ ವಶಕ್ಕೆ ಪಡೆದು ಜಮೀನುಗಳು ಪುನಹ ಒತ್ತುವರಿಯಾಗದಂತೆ ಸಂರಕ್ಷಣಾ ಕ್ರಮ ವಹಿಸಬೇಕು ಎಂಬ ಸರ್ಕಾರದ ಆದೇಶಗಳು ಇದ್ದರೂ ಸಹ ಅಧಿಕಾರಿಗಳು ಒತ್ತುವರೆದಾರರಿಗೆ ಸಹಕರಿಸಿ ದಂತಿದೆ.


ಸರ್ಕಾರಿ ಜಾಗ ಅಥವಾ ಸರ್ಕಾರಿ ಕಾಲುವೆ ಸರ್ಕಾರಿ ರಾಜಕಾಲುವೆ ಗಳನ್ನು ಸರ್ಕಾರಿ ಅಧಿಕಾರಿಗಳು ತೆರುವುಗಳಿಸುವ ಸಂದರ್ಭಗಳಲ್ಲಿ ಜನಪ್ರತಿನಿಧಿಗಳು ಅದಕ್ಕೆ ಅಡ್ಡಿಪಡಿಸಿದರೆ ಅವರ ಯಾವುದೇ ಹುದ್ದೆ ಇದ್ದಲ್ಲಿ ವಜಗೊಳಿಸುವ ಸರ್ಕಾರದೈ ಆದೇಶ ಸಹ ಇದೆ.

ಪಾವಗಡ ಪಟ್ಟಣದಲ್ಲಿ ಬಹಳಷ್ಟು ಸರ್ಕಾರಿ ಜಾಗ ಒತ್ತುವರಿ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷವಾಗಿ ಎಚ್ಚೆತ್ತುಕೊಂಡು ತೆರುವುಗೊಳಿಸಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು ಎಂಬುದಾಗಿ ದೂರುದಾರ ನರಸಿಂಹಯ್ಯ ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ವರದಿ: ಇಮ್ರಾನ್ ಉಲ್ಲಾ ಪಾವಗಡ
https://www.janataa24.com/facebook-facebook-and-instagram-server-down-worldwide/