JANATAA24 NEWS DESK
Badami: “ಮಂದಾರ ಹೂವು”ಚಲನಚಿತ್ರ ಚಿತ್ರೀಕರಣಕ್ಕೆ ಇಂದು ಕ್ಯಾಮರಾ ಚಾಲನೆ.

ಚಾಲುಕ್ಯರ ನಾಡಿನಲ್ಲಿ ಶಾಂತಕುಮಾರ್ ಪಾಟೀಲ ಕಥೆ ಚಿತ್ರಕಥೆ ನಿರ್ದೇಶನದ”ಮಂದಾರ ಹೂವು”ಚಲನಚಿತ್ರ ಚಿತ್ರೀಕರಣಕ್ಕೆ ಇಂದು ಕ್ಯಾಮರಾ ಚಾಲನೆ ಮಾಡಲಾಯಿತು.
ವಸಂತ ಬಸವ ಪ್ರಾಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಸಾರತ್ಯದ ಅವರ ಅವರ ಶಿಷ್ಯರಾದ ಶಾಂತಕುಮಾರ್ ಪಾಟೀಲ್ ಕಥೆ-ಚಿತ್ರಕಥೆ -ನಿರ್ದೇಶನದಲ್ಲಿ ಹಾಗೂ ಗಿರೀಶ್ ಶಿರಗನಹಳ್ಳಿ ಚಾಯಾಗ್ರಹನವಿರುವ ಹಾಗೂ ಪತ್ರಕರ್ತ & ಕಲಾ ನಿರ್ದೇಶನದಲ್ಲಿ ಮಂದಾರ ಹೂವು ಚಲನಚಿತ್ರದ ಮೂಡಿಬರಲಿರುವ “ಮಂದಾರ ಹೂವು”( ಇವಳು ನಮ್ಮ ಮನೆ ಮಗಳು ) ಶೀರ್ಷಿಕೆಯ ಕನ್ನಡ ಚಲನಚಿತ್ರಕ್ಕೆ ಇಂದು ಬಾದಾಮಿಯ ಮಾರ್ಕೆಟ್ ನ ಚೌಡಿಯ ದೊಡ್ಡ ಆಂಜನೇಯ ದೇವಸ್ಥಾನದಲ್ಲಿ ಮಹೂರ್ತ್ ನೆರವೇರಿತು.
ಬಾದಾಮಿಯ ಹೃದಯಭಾಗದಲ್ಲಿರುವ ದೊಡ್ಡ ಆಂಜನೇಯ ದೇವಸ್ಥಾನದ ಪೂಜಾರ ಮನೆತನದವರಿಂದ ಆಂಜನೇಯನಿಗೆ ವಿಶೇಷ ಪೂಜೆ ನೆರವೇರಿಸಿ ನಂತರ ಕ್ಯಾಮರಾ ಚಾಲನೆ ಮಾಡಲಾಯಿತು. ದೇವಸ್ಥಾನದಲ್ಲಿಯೇ ಮೊದಲ ದೃಶ್ಯವನ್ನು ಸೆರೆಹಿಡಿಯಲಾಯಿ.
ಇದೇ ಸಂದರ್ಭದಲ್ಲಿ “ಮಂದಾರ ಹೂವು”ಚಲನಚಿತ್ರದ ಮುಖ್ಯ ಮೇಲ್ವಿಚಾರಕರು ಹಾಗೂ ಸಂಚಾಲಕರಾದ ಪ್ರಭುರಾಜ್ ಹೂಲಗೇರಿ, ನಿರ್ದೇಶಕರಾದ ಶಾಂತಕುಮಾರ್ ಪಾಟೀಲ್, ಕಲಾ ನಿರ್ದೇಶಕರು ಪತ್ರಕರ್ತರೂ ಆದ ರಾಜೇಶ್. ಎಸ್. ದೇಸಾಯಿ,ಛಾಯಾಗ್ರಹಕ ಗಿರೀಶ್ ಶಿರಗನಹಳ್ಳಿ, ನಾಯಕನಟ ಅಕ್ಷಯ್ ಪತ್ತಾರ, ನಾಯಕಿ ಸ್ವಾತಿ ತೋಟರ,ಖಳನಟ ಆನಂದ್ ದೇವಾಡಿಗ, ರವಿ, ಎಚ್. ದೇಸಾಯಿ,ವಸಂತ ಬಡಿಗೇರ ನವೀನ್ ರೋಡ್ಕರ್,ಇನ್ನುಳಿದ ಪಾತ್ರಧಾರಿಗಳಾದ ವಸಂತ ಬಡಿಗೇರ, ಮಂಜು ಬೆಳ್ಳಿಗುಂಡಿ, ಸಂಜನಾ (ತೇಜಸ್ವಿನಿ),ಕಾವೇರಿ, ಚಂದ್ರಿಕಾ, ಪ್ರೇಮಾ ತುಡಬಿನ್, ಸ್ವಾತಿ ರಾಠೋಡ, ಶೈಲಾ ರಾಠೋಡ, ಮಂಜು ಎಚ್ ದೇಸಾಯಿ, ತುಳಸಪ್ಪ ಪಾಟ್ರೋಟಿ, ಪ್ರಕಾಶ್ ಗದ್ದಿಗೌಡ್ರ ಸೇರಿದಂತೆ ಸಹಾಯಕ ನಿರ್ದೇಶಕರುಗಳಾದ(ಅಸಿಸ್ಟಂಟ್ ಡೈರೆಕ್ಟರಗಳಾದ ಸುನಿಲ್. ಎಸ್. ಭಜಂತ್ರಿ,ತುಳಸಪ್ಪ ಪಾಟ್ರೋಟಿ ರವಿ. ಎಚ್. ದೇಸಾಯಿ, ಸುಜಲ್ ರಾಠೋಡ ನವೀನ್ ರೋಡ್ಕರ್,ಇನ್ನೂ ಅನೇಕ ಕಲಾವಿದರು ಹಾಜರಿದ್ದರು.
ವರದಿ:-ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
https://www.janataa24.com/operation-sindor-pok-9-terrorist/