JANATAA24 NEWS DESK
Badami: ಬಾದಾಮಿಯಲ್ಲಿ ಚಿತ್ರನಟ ಸಿ ಪಿ ಯೋಗಿಶ್ವರ್ ಗೆ ಕಂಬಳಿ ಹೊದಿಸಿ ಆಶೀರ್ವದಿಸಿದ ಸಿದ್ದನಕೊಳ್ಳದ ಡಾ! ಶಿವಕುಮಾರ ಮಹಾಸ್ವಾಮಿಗಳು.

ಬಾದಾಮಿ: “ಕರ್ನಾಟಬಲಂ ಅಜೇಯo”ಚಲನಚಿತ್ರ ಚಿತ್ರೀಕರಣದಲ್ಲಿ ನಟ ಸಿ ಪಿ ಯೋಗಿಶ್ವರ್ ಗೆ ಕಂಬಳಿ ಹೊದಿಸಿ ಆಶೀರ್ವಾದ ಮಾಡಿದ ಸುಕ್ಷೇತ್ರ ಸಿದ್ದನಕೊಳ್ಳದ ಶ್ರೀ ಡಾ!!ಶಿವಕುಮಾರ್ ಮಹಾಸ್ವಾಮಿಗಳು
ಸೈನಿಕ ಚಲನಚಿತ್ರದ ನಟ ಸಿ ಪಿ ಯೋಗಿಶ್ವರ್ ನಿರ್ಮಾಣದ ಚಾಲುಕ್ಯರ ಅರಸ ದಕ್ಷಿಣ ಪಥೇಶ್ವರ ಬಿರುದಂಕಿತ ವೀರ ಪ್ರರಾಕ್ರಮಿ ಇಮ್ಮಡಿ ಪುಲಿಕೇಶಿ ಮಹಾರಾಜರ ಕಥೆಯನ್ನು ಇಟ್ಟುಕೊಂಡು ಹೆನೆದಿರುವ ನಟ ಸಿ ಪಿ ಯೋಗಿಶ್ವರ್ ಅವರ ಪುತ್ರ ಧ್ಯಾನ್ ಯೋಗಿಶ್ವರ್ ನಾಯಕನಟನಾಗಿರುವ ” ಕರ್ನಾಟಬಲಂ ಅಜೇಯo” ಚಲನಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಬಾದಾಮಿಯ ಚಾಲುಕ್ಯರ ಅರಸರ ಬೆಟ್ಟದಲ್ಲಿಯೇ ನಿರ್ಮಿಸಿದ ಗುಹಾoತರ ದೇವಾಲಯಗಳ ಪ್ರಕೃತಿಯ ಲ್ಲಿ ಚಿತ್ರೀಕರಣಕ್ಕೆ ಸುಕ್ಷೇತ್ರ ಸಿದ್ದನಕೊಳ್ಳದ ಶ್ರೀ ಡಾ!!ಶಿವಕುಮಾರ್ ಮಹಾಸ್ವಾಮಿಗಳು ಆಗಮಿಸಿ ನಟ ಸಿ ಪಿ ಯೋಗಿಶ್ವರ್ ಅವರಿಗೆ ಸಂಪ್ರದಾಯಿಕ ಕಂಬಳಿ ಹೊದಿಸಿ ಚಿತ್ರ ಯಶಸ್ವಿಯಾಲಿ ಎಂದು ಆಶೀರ್ವಾದ ಮಾಡಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರನ್ನು ಜೊತೆಗೆ ಕೆರೆಯಿಸಿಕೊಂಡ ನಟ ಸಿ ಪಿ ಯೋಗಿಶ್ವರ್ ಭಾವಚಿತ್ರ ತೆಗಿಸಿಕೊಂಡರು. ಇದೇ ಸಂದರ್ಭದಲ್ಲಿ ಹೋರಾಟಗಾರ ಹುಬ್ಬಳ್ಳಿಯ ಮುತ್ತಣ್ಣ, ಪತ್ರಕರ್ತರು ಹಾಗೂ ಜ್ಯುನಿಯರ್ ಆರ್ಟಿಸ್ಟ್ ಕೋಆರ್ಡಿನೆಟರ್ ರಾಜೇಶ್. ಎಸ್. ದೇಸಾಯಿ ಹಾಗೂ ಹುಬ್ಬಳ್ಳಿ ಯ ಸಿನಿ ಪ್ರಿಯರು ಹಾಗೂ ಸರ್ವ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.
ವರದಿ: ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
https://www.janataa24.com/operation-sindor-pok-9-terrorist/
..