Janataa24 NEWS DESK

ಪಾವಗಡ: ತಾಲೂಕಿನ ವೆಂಕಟಮ್ಮನಹಳ್ಳಿಯ ಗ್ರಾಮದ
ಗಡಿಪ್ರದೇಶದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿದ ಲಕ್ಷ್ಮಮ್ಮ ದೇವಿ ಹಾಗೂ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇಗುಲದಲ್ಲಿ

ಸೂರ್ಯನ ಕಿರಣಗಳು ಗರ್ಭಗುಡಿ ಪ್ರವೇಶಿಸಿ ದೇವರ ವಿಗ್ರಹ ಮೇಲೆ ಪ್ರಕಾಶಿಸಿವೆ. ಈ ವಿಸ್ಮಯ ಭಕ್ತರಲ್ಲಿ ಅಚ್ಚರಿ ಹಾಗೂ ಭಕ್ತಿಭಾವ ಹೆಚ್ಚಿಸಿದೆ.

ವೆಂಕಟಮ್ಮನಹಳ್ಳಿ ಹೊರವಲಯದಲ್ಲಿ ದಾನಿಗಳ ಸಹಕಾರದ ಮೇರೆಗೆ ಇತ್ತೀಚೆಗೆ ಕೋಟ್ಯಂತರು ರು. ವೆಚ್ಚದ ನಿರ್ಮಿಸಿದ್ದು, ಮಂಗಳವಾರ ಬೆಳಿಗ್ಗೆ ಸೂರ್ಯನ ಕಿರಣಗಳು ವಿಗ್ರಹವನ್ನು ತಾಕಿವೆ.

ನಿಮಿಷಕ್ಕೂ ಹೆಚ್ಚು ಕಾಲ ಸೂರ್ಯನ ಕಿರಣ ಪ್ರಕಾಶಿಸಿದೆ. ಮೊಬೈಲ್ನಲ್ಲಿ ಸೆರೆ ಹಿಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಹೆಚ್ಚಿನ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸಿತ್ತಿದ್ದಾರೆ ಎಂದು ದೇವಸ್ಥಾನ ಸಮಿತಿಯ ಮುಖಂಡ ಡಾ.ಜಿ. ವೆಂಕಟರಾಮಯ್ಯ ತಿಳಿಸಿದ್ದಾರೆ.

ಅಂತರ ಮಾತನಾಡಿ ಒಂದು ದೇವಸ್ಥಾನ ನೂತನ ನಿರ್ಮಿಸುವಂತಹ ದೇವಸ್ಥಾನಕ್ಕೆ ಬಹಳಷ್ಟು ಹಿನ್ನೆಲೆ ಇದ್ದು ಈ ಒಂದು ದೇವಸ್ಥಾನದಲ್ಲಿ ಈ ಹಿಂದೆ ಬಹಳಷ್ಟು ಗ್ರಾಮಗಳಿಂದ ಬಂದು ಪೂಜೆ ಸಲ್ಲಿಸಿ ತಮ್ಮ ತಮ್ಮ ಹಾರೈಕೆ ಪೂರ್ಣಗೊಳಿಸುತ್ತಿದ್ದರು ಮದುವೆ ಆದಾಗ ಹೆಣ್ಣು ಮಕ್ಕಳಿಗೆ ಮದುವೆಗಳು ಆಗುವುದು.

ಮಕ್ಕಳಾದಂತಹ ಹೆಣ್ಣು ಮಕ್ಕಳಿಗೆ ಮಕ್ಕಳು ಹಾಗೂ ಕೆಲಸ ಇಲ್ಲದಂತಹ ವಿದ್ಯಾವಂತ ಯುವಕ ಯುವತಿಯರಿಗೆ ಕೆಲಸದ ವಿಚಾರವಾಗಿ ಹಾಗೂ ಸಮಸ್ಯೆಗಳ ವಿಚಾರವಾಗಿ ಹರಕೆ ಹೊತ್ತಿದ್ದಂತವರಿಗೆ ಬಹಳಷ್ಟ ಅನುಕೂಲವಾಗಿವೆ ಎಂಬುದು ಈ ಭಾಗದ ಭಕ್ತಾದಿಗಳ ಮಾತಾಗಿದೆ. ಈ ಒಂದು ದೇವಸ್ಥಾನ ವಿಶೇಷ ಎಂಬುದಾಗಿ ತಿಳಿಸಿದರು.
ವರದಿ: ಇಮ್ರಾನ್ ಉಲ್ಲಾ. ಪಾವಗಡ