Janataa24 NEWS DESK

ಪಾವಗಡ
ಈ ಭಾಗದ ಹೆಣ್ಣುಮಕ್ಕಳಲ್ಲಿ ತಮ್ಮ ಮೇಲೆ ಬಹಳಷ್ಟು ಗೌರವ ಅಭಿಮಾನ ಇದೆ ಅದರೆ. ಇತ್ತೀಚೆಗೆ ಮಹಿಳೆಯರಿಗೂ ಸಹ ರಕ್ಷಣೆಯು ಇಲ್ಲದಂತಾಗಿದೆ. ಪಾವಗಡಕ್ಕೆ ಬಂದಂತ ಸಮಯದಲ್ಲಿ ಇದ್ದಂತಹ ಅಜಯ್ ಸಾರಥಿ ಮತ್ತೆ ಇರಬೇಕು ಎಂಬುದು ಈ ಭಾಗದ ಜನರಲ್ಲಿ ಒತ್ತಾಯ.

ಸಿಪಿಐ ಅಜಯ್ ಸಾರಥಿ ಪಾವಗಡಕ್ಕೆ ಬಂದಂತಹ ದಿನದಲ್ಲಿ ಇದ್ದಂತ ಜೋಶು ಇತ್ತೀಚೆಗೆ ಯಾಕೋ ಕಂಡು ಬರುತ್ತಿಲ್ಲ ಎಂಬುದಾಗಿ ಅಂಗನವಾಡಿ ಸಿಬ್ಬಂದಿ ಸುಶೀಲಮ್ಮ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ತಿಳಿಸಿದ್ದಾರೆ.

ಪಾವಗಡ ಪಟ್ಟಣದ ಅಂದ್ರಗಿರಿ ಭವನದಲ್ಲಿ ಪೋಲಿಸ್ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಿದ್ದ ಸಾರ್ವಜನಿಕರ ಕೊಂದು ಕೊರತೆ ಸಭೆಯಲ್ಲಿ ಮಾತನಾಡಿದ ಸುಶೀಲಮ್ಮ ಪಾವಗಡಕ್ಕೆ ಹೊಸದಾಗಿ ಬಂದಂತಹ ವೇಳೆ ಇದ್ದ ಗತ್ತು ಜೋಶ್ ಸಿಪಿಐ ಅಜಯ್ ಸಾರಥಿ ಯವರದು ಇತ್ತಿಚಿಗೆ ಆದು ಕಾಣುತ್ತಿಲ್ಲ.ಇತ್ತಿಚೆಗೆ ಅವರ ಕಾರ್ಯ ವೈಖರಿ ಕಡಿಮೆ ಯಾಗಿದ್ದು ಏಕೋ ಎಂಬುದು ಗೊತ್ತಿಲ್ಲ.
ಈ ಹಿಂದೆ ಮಟ್ಕಾ ಇಸ್ಪೀಟು ಇತರೆ ಕಾರ್ಯ ವೈಖರಿಗಳು ತಡೆಯುವದಾಗಿ ಹೇಳಿ ವಿವಿಧ ರೀತಿಯ ಜಾತಗಳು ಮಾಡಿದರು. ಮತ್ತೆ ಮಟ್ಕ ಇಸ್ಪೀಟು ಎತಸ್ಥಿತಿ ಮುಂದುವರಿದ ಎಂಬುದಾಗಿ ತಿಳಿಸಿದರು.

ತಾಲೂಕಿನ ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಪೆಟ್ಟಿಗೆ ಅಂಗಡಿಗಳಲ್ಲಿ ಮದ್ಯದ ತಾಣವಾಗಿವೆ. ಹೆಣ್ಣು ಮಕ್ಕಳು ಓಡಾಡಲು ಬಹಳಷ್ಟು ಕಿರಿಕಿರಿಯಾಗುತ್ತಿದೆ.
ಎಸ್ ಎಲ್ ಸಿ ಪರೀಕ್ಷೆ ಕೇಂದ್ರಗಳಲ್ಲಿ ಕಾಪಿ ಎಂಬುದಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಯಿತು ಆದರೆ ಅಲ್ಲಿ ಸಹ ತಮ್ಮ ಪೊಲೀಸ್ ಇಲಾಖೆ ಕರ್ತವ್ಯ ವಿಫಲವಾಯಿತು.

ಬಹಳಷ್ಟು ವಿಭಾಗದಲ್ಲಿ ಕಾನೂನು ಹದಗಟ್ಟಿದೆ ಇದನ್ನ ಸರಿಪಡಿಸುವುದು ಪ್ರಥಮ ಹಕ್ಕು ಪೋಲಿಸ್ ಇಲಾಖೆಯವರದು.
ಸಭೆಯಲ್ಲಿ ತಾಳೆ ಮರದಹಳ್ಳಿ ಗ್ರಾಮದ ಮಂಜುನಾಥ ಮಾತನಾಡಿ ಈ ಹಿಂದೆ ಗ್ರಾಮೀಣ ಭಾಗದಲ್ಲಿ ಬೀಟ್ ಇನ್ಫಾರ್ಮಶನ್ ಎಂಬ ರೀತಿಯಲ್ಲಿ ಕೆಲವೊಬ್ಬರಿಗೆ ಆಯ್ಕೆ ಮಾಡಲಾಗಿತ್ತು ಆದರೆ ಅವರಿಗೆ ಯಾವುದೇ ತರದ ಮಾಹಿತಿ ಇಲ್ಲದೆ ಆ ಪೊಲೀಸ್ ಇಲಾಖೆ ಮೊಬೈಲ್ ಗ್ರೂಪ್ಗಳಲ್ಲಿ ಸಹ ಸೇರಿಸದೆ ನಿರ್ಲಕ್ಷಕ್ಕೆ ಒಳಪಟ್ಟಲಾಯಿತು ಎಂಬುದಾಗಿ ಮಂಜುನಾಥ್ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ. ಇತರೆ ಹಲವು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.
ವರದಿ
ಪಾವಗಡ:ಇಮ್ರಾನ್ ಉಲ್ಲಾ.