Janataa24: NEWS DESK

ಟಿ ಬಿ ಕ್ರಾಸ್ ದಲಿತ ಕಾಲೋನಿಯಲ್ಲಿ ಇಂದು ಡಾ.ಬಿ ಆರ್ ಅಂಬೇಡ್ಕರ್ ರವರ 132 ನೇ ಜಯಂತಿ ಆಚರಣೆ.
ತುರುವೇಕೆರೆ ಮಾಯಸಂದ್ರ ಹೋಬಳಿ, ಸೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಟಿ ಬಿ ಕ್ರಾಸ್ ದಲಿತ ಕಾಲೋನಿಯಲ್ಲಿ,

ಇಂದು ಡಾ. ಬಿ ಆರ್ ಅಂಬೇಡ್ಕರ್ ಅವರ 132 ನೇ ಜಯಂತಿಯನ್ನು ಬಹಳ ಸರಳವಾಗಿ ಮೇಣದಬತ್ತಿ ಬೆಳಗುವುದರ ಮೂಲಕ ಅಂಬೇಡ್ಕರ್ ಭಾವಚಿತ್ರಕ್ಕೆ ನಮನ ಸಲ್ಲಿಸಿದರು,
ಇದೆ ವೇಳೆ ಅಂಬೇಡ್ಕರ್ ಅವರನ್ನು ಕುರಿತು ಕ್ರಾಂತಿ ಗೀತೆಯನ್ನು ದಲಿತ ಮುಖಂಡರಾದ ಕೆ ಟಿ ಗೋವಿಂದ್ರಾಜ್, ಯೋಗೇಶ್ ,ರವಿಕುಮಾರ್, ಪರಮೇಶ್ ,ಇನ್ನು ಅನೇಕ ಯುವಕರು ಕ್ರಾಂತಿ ಗೀತೆ ಹಾಡುವುದರ ಮೂಲಕ ಬಹಳ ಸರಳವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದರು,
ಇದೇ ಸಂದರ್ಭದಲ್ಲಿ ಮಕ್ಕಳು ಸಹ ಈ ಜಯಂತಿಯಲ್ಲಿ ಪಾಲ್ಗೊಂಡು ಬಹಳ ಸಂತೋಷದಿಂದ ಅಂಬೇಡ್ಕರ್ ಜಯಂತಿಯನ್ನು ಮೇಣದಬತ್ತಿ ಬೆಳಗುವುದರ ಮೂಲಕ ಬಹಳ ಸರಳವಾಗಿ ಆಚರಿಸಿದರು,


ಇದೆ ವೇಳೆ ಜೈ ಭೀಮ್ ಬಂಧುಗಳಾದ ಮಾಯಮ್ಮ, ಅನುಸೂಯಮ್ಮ, ಕೆ ಟಿ ಶ್ರೀನಿವಾಸ್, ಡಿ ಡಿ ರಘು, ನಾಗಣ್ಣ ,ಶಶಿಕುಮಾರ್, ತಿಮ್ಮಪ್ಪ ,ಶ್ರೀನಿವಾಸ್, ಮೋಹನ್ ಕುಮಾರ್, ಶಿವರಾಜ್ ಅರಸು, ನೂರಾರು ಮಂದಿ ಈ ಜಯಂತಿಯಲ್ಲಿ ಪಾಲ್ಗೊಂಡಿದ್ದರು,
ವಿಶೇಷವಾಗಿ ಈ ಸಂದರ್ಭದಲ್ಲಿ ಮಹಿಳೆಯರು ಅಂಬೇಡ್ಕರ್ ಅವರ ಜಯಂತಿಯನ್ನು ಮಾಡಲು ಬಹಳ ಸಂತೋಷ ವ್ಯಕ್ತಪಡಿಸಿ, ಈ ಜಯಂತಿಯಲ್ಲಿ ಅವರು ಸಹ ಪಾಲ್ಗೊಂಡಿದ್ದರು.