ತಿಪಟೂರು ನಮ್ಮ ರಾಜ್ಯದ ಹೆಮ್ಮೆಯ ಉನ್ನತ ನಂದಿನಿ ನಮಗೆ ಇರಲಿ ಹೊರ ರಾಜ್ಯದ ಬೇಡಿಕೆ ಇಲ್ಲದ ಅಮುಲ್ ನಮಗೆ ರಾಜ್ಯಸಾರ್ಕಾರ ವಿಲೀನ ಗೋಳಿಸಲು ಪ್ರಯತ್ನಿಸಿದರೆ ರಾಜ್ಯ ವ್ಯಾಪ್ತಿ ರೈತ ಸಂಘದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ರೈತ ಸಂಘದ ತಾಲೂಕು ಮುಖಂಡರಾದ ರಾಜಣ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು

ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯದ ರೈತರು ನಿರುದ್ಯೋಗ ಯುವಕ ಯುವತಿಯರು ಹೈನುಗಾರಿಕೆಯನ್ನು ಪ್ರಮುಖ ಉದ್ಯಮವನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೊರ ರಾಜ್ಯವಾದ ಗುಜರಾತ್ ನಲ್ಲಿ. ಮಾರಾಟ ಹಾಗೂ ಬೇಡಿಕೆಯಿಲ್ಲದ ಅಮುಲ್ ಕಂಪನಿಯನ್ನು ನಂದಿನಿ ಜೊತೆಗೆ ವಿಲೀನ ಗೋಳಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಇದರಿಂದ
ಹೈನುಗಾರಿಕೆ ನಂಬಿ
ಜೀವನ ಸಾಗಿಸುತ್ತಿರುವ ರೈತರು ನಿರುದ್ಯೋಗಿಗಳು ಬೀದಿ ಪಾಲಗುತ್ತಾರೆ ಕೂಡಲೆ ಸರ್ಕಾರ ಈ ವಿಚಾರ ದಿಂದ ಹಿಂದೆಸರಿಯಬೇಕು ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ಸಿದ್ದಯ್ಯ ಬಳುವ ನೇರಲು ಯೋಗನಂದ ಸುಧಕರ್ ರೈತ ಸಂಘದ ಮುಖಂಡರು ಹಾಜರಿದ್ದರು
