Turuvekere: ಕೇರಳದ ಇಡುಕ್ಕಿ ಬಳಿ ತುರುವೇಕೆರೆ ತಾಲೂಕಿನ ಕೊಂಡಜ್ಜಿ ಗ್ರಾಮದ ಜೀವನ್ ಗೌಡ ಅಪಘಾತದಲ್ಲಿ ನಿಧನ.

ತುರುವೇಕೆರೆ: ತಾಲೂಕಿನ ಕೊಂಡಜ್ಜಿ ಗ್ರಾಮದ ಬಿಜೆಪಿ ಹಿರಿಯ ಮುಖಂಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ಹಾಗೂ ಎಪಿಎಂಸಿ(APMC) ಮಾಜಿ ಅಧ್ಯಕ್ಷರು ಆದ ಕೊಂಡಜ್ಜಿ ವಿಶ್ವನಾಥ್ ಶ್ರೀಮತಿ ಲತಾ ವಿಶ್ವನಾಥ್ ಅವರ ಹಿರಿಯ ಪುತ್ರ ಕೆ ವಿ ಜೀವನ್ ಗೌಡ ಎಂಬುವರು ನಿನ್ನೆ ತಡರಾತ್ರಿ ಕೇರಳದ ಇಡುಕ್ಕಿ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ,
ಇನ್ನು ಜೀವನ್ ಗೌಡ(Jeevan Gowda) ಅವರು ಹಾಲಿ ಗ್ರಾಮ ಪಂಚಾಯತಿ ಸದಸ್ಯರು ಆಗಿದ್ದು ತಮ್ಮ ಕುಟುಂಬದವರೊಂದಿಗೆ ಪ್ರವಾಸಕ್ಕೆಂದು ಟೆಂಪೋ ಟ್ರಾವೆಲ್ ನಲ್ಲಿ ಹೋಗಿದ್ದ ವೇಳೆ ಕೇರಳದ ಇಡುಕ್ಕಿ ಬಳಿ ಈ ಅಪಘಾತ ಸಂಭವಿಸಿ ಅಲ್ಲೇ ಸಮೀಪದ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ, ಜೊತೆಗೆ ಅಪಘಾತಕ್ಕೀಡಾದ ಟೆಂಪೋ ಟ್ರಾವೆಲ್ ವಾಹನದಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಇನ್ನೂ ಕೂಡ ತಿಳಿದುಬಂದಿಲ್ಲ, ಮಂಗಳವಾರದಂದು ಜೀವನ್ ಗೌಡ ಅವರ ಪಾರ್ಥಿವ ಶರೀರವನ್ನು ತಮ್ಮ ಸ್ವಗ್ರಾಮ ಕೊಂಡಜ್ಜಿಗೆ ತರಲಾಗುವುದು ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.
ವರದಿ: ಮಂಜುನಾಥ್ ತುರುವೇಕೆರೆ.