Janataa24 NEWS DESK
Tumkur: ಬೋನಿಗೆ ಬಿದ್ದ ಚಿರತೆ,
ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ತುರುವೇಕೆರೆ: ತಾಲೂಕಿನ ದೊಂಬರನಹಳ್ಳಿ ಗ್ರಾಮ ಸೇರಿದಂತೆ ಅಕ್ಕ ಪಕ್ಕದಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಸುಮಾರು ದಿನಗಳಿಂದ ಈ ಭಾಗಗಳಲ್ಲಿ ಚಿರತೆಯ ಕಾಟ ಹೆಚ್ಚಾಗಿತ್ತು.
ಇದಕ್ಕೆ ಸಂಬಂಧಪಟ್ಟ ಅರಣ್ಯ ಇಲಾಖೆ(Forest Department)ಯವರಿಗೂ ಸಹ ಗ್ರಾಮಸ್ಥರಿಂದ ಮಾಹಿತಿಯನ್ನು ನೀಡಿದ್ದು, ತಕ್ಷಣ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ, ಚಿರತೆಯನ್ನು ಸೆರೆ ಹಿಡಿಯಲು ದೊಂಬರನಹಳ್ಳಿ ಬಳಿ ಬೋನೊಂದನ್ನು ಇಟ್ಟಿದ್ದು, ನೆನ್ನೆ ತಡರಾತ್ರಿ ಚಿರತೆ(Cheetah) ಬೋನಿನೊಳಗೆ ಸೆರೆಯಾಗಿದೆ.
ಒಟ್ಟಾರೆ ದೊಂಬರನಹಳ್ಳಿ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಸುಮಾರು ದಿನಗಳಿಂದ ಚಿರತೆಯ ಕಾಟದಿಂದಾಗಿ ಕಂಗೆಟ್ಟು ತಮ್ಮ ತಮ್ಮ ತೋಟಗಳಿಗೆ ತೆರಳಲು ಭಯಭೀತರಾಗಿ ಬದುಕುವಂಥ ಪರಿಸ್ಥಿತಿಯಲ್ಲಿದ್ದರು ಎನ್ನಲಾಗಿದೆ. ಒಟ್ಟಾರೆ ಸುತ್ತ ಮುತ್ತಲಿನ ಜನತೆ ಈ ಚಿರತೆಯ ಸೆರೆಯಿಂದಾಗಿ ನಿಟ್ಟಿಸಿರು ಬಿಟ್ಟಂತಾಗಿದೆ.
ವರದಿ: ಮಂಜುನಾಥ್ ತುರುವೇಕೆರೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv