Tiptur: ಜನ ಮೆಚ್ಚಿದ ಮಗ,ಜಗ ಮೆಚ್ಚಿದ ವೈದ್ಯರಿಗೆ ಅಭಿನಂದನೆಗಳು.
ತಿಪಟೂರು:- ಮಂಜುನಾಥ್
ತಿಪಟೂರು ಸತತ ಮೂವತ್ತು ವರ್ಷಗಳ ಜನಸೇವೆ ಸಮಾಜ ಸೇವೆಯಲ್ಲಿ ತೊಡಗಿರುವ ಜೊತೆಗೆ ಕೊರೋನಾ ಸಮಯದಲ್ಲಿ ಎಲ್ಲಾ ಹಡ್ಡಿ ಆತಂಕಗಳನ್ನು ಮೆಟ್ಟಿ ನಿಂತು ನೂರಾರು ಜೀವಗಳ ಉಳಿಸಿದ ಕರುಣಾಮಯಿ ಡಾಕ್ಟರ್ ಶ್ರೀಧರ್ ಬಡವರ ಬಂಧು ವೈದ್ಯರು ಅದೃಷ್ಟವಂತ ಧಾರ್ಮಿಕ ಕಾರ್ಯಕರ್ತ ಜನ ಮೆಚ್ಚಿದ ಜಗ ಮೆಚ್ಚಿದ ವೈದ್ಯ ಡಾ. ಶ್ರೀಧರ್ ಕುಮಾರ್ ಆಸ್ಪತ್ರೆ ವೈದ್ಯ ಇವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿರೋದು ಕಲ್ಪತರು ನಾಡಿಗೆ ಹರ್ಷವನ್ನು ತಂದುಕೊಟ್ಟಿದೆ.

ಇದರ ಸಂಬಂಧ ನವಂಬರ್ ಒಂದರ ಸಂಜೆ ನಾಲ್ಕು ಗಂಟೆಗೆ ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆಯಲಿರುವ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜನಾನುರಾಗಿ ಸಂಸ್ಕೃತಿ ರಕ್ಷಕ ಡಾ. ಶ್ರೀಧರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಇದರಿಂದಾಗಿ ಸಾರ್ವಜನಿಕರಿಂದ ಅಭಿಮಾನದ ಸುರಿಮಳೆ, ಜೊತೆಗೆ ಕನ್ನಡದ ದಿನಪತ್ರಿಕೆಯಾದ ಆದಿತ್ಯ ವಾಣಿ ವ್ಯವಸ್ಥಾಪಕ ಕಾರ್ಯನಿರ್ವಾಹಕ ಸಂಪಾದಕರಾದ ಡಾ. ಶ್ರೀಧರ್ ಅವರಿಗೆ ಸಮಸ್ತ ಜನತೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು.