Janataa24 NEWS DESK
Turuvekere: ನೇರ ದೃಷ್ಟಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮನವಮಿ ಆಚರಣೆ.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಟಿ ಬಿ ಸರ್ಕಲ್ ನಲ್ಲಿರುವ ನೇರ ದೃಷ್ಟಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಇಂದು ಆಂಜನೇಯ ಮೂರ್ತಿಗೆ ಚೈತ್ರ ಮಾಸದ 9ನೇ ದಿನವಾದ ಇಂದು ಹತ್ತಿ ಅಲಂಕಾರ ಮಾಡಿ ವಿವಿಧ ಪೂಜಾ ಕೈಂಕರ್ಯಗಳನ್ನು ಅರ್ಚಕರುಗಳಾದ ಜನಾರ್ಧಸ್ವಾಮಿ, ಮತ್ತು ಹನುಮೇಗೌಡ ಅವರು ನೆರವೇರಿಸಿದರು. ನೂರಾರು ಭಕ್ತರ ಸಮ್ಮುಖದಲ್ಲಿ ಆಂಜನೇಯ ಮೂರ್ತಿಗೆ ಮಹಾಮಂಗಳಾರತಿ ನೆರವೇರಿಸಿ, ಆಗಮಿಸಿದ ನೂರಾರು ಭಕ್ತ ಸಮೂಹಕ್ಕೆ ಭಕ್ತರಿಂದಲೇ ಭಕ್ತಾದಿಗಳಿಗೆ ಜಾತಿ ಧರ್ಮವೆಂಬ ಕಟ್ಟಳೆಗಳನ್ನು ಬದಿಗೊತ್ತಿ ಕೋಸಂಬರಿ, ಮಜ್ಜಿಗೆ, ಪಾನಕ, ಹಾಗೂ ಅನ್ನದಾನ ಮಾಡುವ ಮೂಲಕ ಸೌಹಾರ್ದತೆ ಎಂಬ ಮಂತ್ರ ಪಠಣೆಯೊಂದಿಗೆ ಇಂದು ರಾಮನವಮಿ ಹಬ್ಬವನ್ನು ಆಚರಿಸಲಾಯಿತು. ಇದೆ ವೇಳೆ ಸುತ್ತಮುತ್ತಲಿನ ಗ್ರಾಮಸ್ಥರುಗಳು ,ಭಕ್ತಾದಿಗಳು, ವಿವಿಧ ಪರ ಸಂಘಟನೆಗಳ ಯುವಕರು, ಊರಿನ ಹಿರಿಯ ಮುಖಂಡರು ಯುವ ಮುಖಂಡರು ಮಹಿಳಾ ಭಕ್ತಾದಿಗಳು, ಪುಟ್ಟ ಮಕ್ಕಳೊಂದಿಗೆ ಕುಟುಂಬ ಸಮೇತ ಆಗಮಿಸಿ ರಾಮನವಮಿ(RamaNavami) ಹಬ್ಬದ ಹಿನ್ನೆಲೆ ಇಂದು ನೇರ ದೃಷ್ಟಿ ಆಂಜನೇಯ ಸ್ವಾಮಿ ಕೃಪೆಗೆ ಪಾತ್ರರಾದರು.
ವರದಿ. ಮಂಜುನಾಥ್ ಕೆ ಎ ತುರುವೇಕೆರೆ.
https://www.janataa24.com/lokasabha-congress-candidate-muddhanumegowda-is/
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en