Document

ಸಂವಿಧಾನ ಜಾಗ್ರತಾ ಜಾಥ ಕಾರ್ಯಕ್ರಮದ ಪೂರ್ವಭಾವಿ ಸಭೆ.

Janataa24 NEWS DESK

IMG 20240207 WA0005


ತುರುವೇಕೆರೆ: ತಾಲೂಕಿನಲ್ಲಿ -ಫೆಬ್ರವರಿ 13 ರಿಂದ 18 ರವರೆಗೆ ತಾಲೂಕಿನಾದ್ಯಂತ ಸಂವಿಧಾನ ಜಾಗೃತಿ ಜಾಥಾ ಬಗ್ಗೆ ಹಾಗೂ ಸಂವಿಧಾನದ ಮಹತ್ವ ಜೊತೆಗೆ ‌ಮುಂದಾಗುವ ಪರಿಣಾಮಗಳ ಬಗ್ಗೆ ಜಾಗ್ರತೆ ಮೂಡಿಸುವ ಕಾರ್ಯಕ್ರಮದ
ಹಿನ್ನೆಲೆ ಇಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನ ದಂಡಾಧಿಕಾರಿ ವೈ ಎಂ ರೇಣು ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

IMG 20240207 WA0003



ಇದೆ ವೇಳೆ ತಹಶೀಲ್ದಾರ್ ವೈ ಎಂ ರೇಣು ಕುಮಾರ್ ಮಾತನಾಡಿ
ಇದೇ ತಿಂಗಳು 12ನೇ ತಾರೀಕು ಸಂಜೆ ಸಂವಿಧಾನ ಜಾಗೃತಿ ಜಾಥ ರಥ ನಮ್ಮ ತಾಲೂಕಿಗೆ ಆಗಮಿಸಲಿದ್ದು,
ಪ್ರತಿ ಹಳ್ಳಿಗಳ ಜನರಲ್ಲಿ ಕಾನೂನಿನ ಸುವ್ಯವಸ್ಥೆ ಬಗ್ಗೆ ಹಾಗೂ ಸರ್ಕಾರದಿಂದ ಬಂದಂತಹ ಅನುದಾನದ ಉಪಯೋಗ ಬಗ್ಗೆ ಜನರಲ್ಲಿ ‌ಮತ್ತು ಮಕ್ಕಳಿಗೆ ಜಾಗೃತಿ ಮೂಡಿಸುವ ಜಾಥಾ ಇದಾಗಿದ್ದು,

IMG 20240207 WA0004



ಜನೆವರಿ 26 ರಂದು ಪ್ರಾರಂಭವಾದ ಈ ಸಂವಿಧಾನ ಜಾಗ್ರತಾ ಜಾತಾ ಮುಂದಿನ 26 ನೇ ಪ್ರೇಬ್ರವರಿ ಬೆಂಗಳೂರು ತಲುಪಲಿದೇ ಎಂದರು.



ಮುಂದುವರೆದು ಮಾತನಾಡಿದ ಅವರು ನಮ್ಮ ತಾಲೂಕಿಗೆ ಆಗಮಿಸಲಿರುವ ಸಂವಿಧಾನ ಜಾಗೃತಿ ಜಾತ ರಥವನ್ನು ಬಹಳ ವಿಜೃಂಭಣೆಯಿಂದ ಸ್ವಾಗತಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಇನ್ನು ಈ ಸಭೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು, ಮತ್ತು ವಿವಿಧ ಪರ ಸಂಘಟನೆಗಳು, ಹಾಗೂ ದಲಿತಪರ ಸಂಘಟನೆಯ ಮುಖಂಡರುಗಳು ಭಾಗವಹಿಸಿ ಕಾರ್ಯಕ್ರಮದ ರೂಪರೇಶಗಳ ಬಗ್ಗೆ ಚರ್ಚಿಸಲಾಯಿತು.



ಒಟ್ಟಾರೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಇನ್ನೂ ಕಾನೂನಿನ ವ್ಯವಸ್ಥೆ ಹಾಗೂ ಸಂವಿಧಾನವನ್ನು ಕಾಪಾಡಲು ಈ ಕಾರ್ಯಕ್ರಮ ಮಾಡಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದು ತಾಲೂಕು ದಂಡಾಧಿಕಾರಿ ಹೇಳಿದರು.



ವರದಿ: ಮಂಜುನಾಥ್ ಕೆಎ ತುರುವೇಕೆರೆ.

Document

Leave a Reply

Your email address will not be published. Required fields are marked *