Document

Tumkur: ಶಾಸಕರ ಗೆಲುವಿಗಾಗಿ ಹರಕೆ ಹೊತ್ತ ಜೆಡಿಎಸ್ ಕಾರ್ಯಕರ್ತರು.

Janataa24 NEWS DESK

ಶಾಸಕರ ಗೆಲುವಿಗಾಗಿ ಹರಕೆ ಒತ್ತ, ಸಿಎಸ್ ಪುರ ಜೆಡಿಎಸ್ ಕಾರ್ಯಕರ್ತರು.



ಬೆಂಗಳೂರಿನ ಚಾಮರಾಜಪೇಟೆಯ ಗವಿಪುರಂ ನಿಂದ ಧರ್ಮಸ್ಥಳದವರೆಗೆ ಕಾಲ್ನಡಿಗೆ.

img 20240226 wa00203756287668523517661



ಶಾಸಕ ಎಂಟಿ ಕೃಷ್ಣಪ್ಪ ಅವರಿಂದ ಪಾದಯಾತ್ರೆಗಳಿಗೆ ಶುಭ ಹಾರೈಕೆ.

img 20240226 wa00195528888290649163932



ತುರುವೇಕೆರೆ: ಕಳೆದ ಬಾರಿ ತುರುವೇಕೆರೆ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ  ಈಗಿನ ಜೆಡಿಎಸ್ ಶಾಸಕರಾದ ಎಂ ಟಿ ಕೃಷ್ಣಪ್ಪನವರ ಗೆಲುವಿಗಾಗಿ. ಸಿಎಸ್ ಪುರ ಹೋಬಳಿಯ ಜೆಡಿಎಸ್ ಕಾರ್ಯಕರ್ತರು ಇವರ ಗೆಲುವಿಗಾಗಿ ಹರಕೆ ಹೊತ್ತ ಹಿನ್ನೆಲೆಯಲ್ಲಿ,



25ನೇ ಭಾನುವಾರದಂದು ಬೆಂಗಳೂರಿನ ಗವಿಪುರಂನಿಂದ  ಧರ್ಮಸ್ಥಳಕ್ಕೆ ಸುಮಾರು 60 ಜನ ಪಾದಯಾತ್ರಿಗಳು ಸುಮಾರು 305 ಕಿ.ಮೀ ಗಳಷ್ಟು ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿ, ಪ್ರತಿದಿನಕ್ಕೆ 40 ಕಿ.ಮೀ ಪಾದಯಾತ್ರೆ ಬೆಳೆಸಲಿದ್ದು, ಮುಂದಿನ ಮಾರ್ಚ್ 5ನೇ ತಾರೀಕು ಧರ್ಮಸ್ಥಳ ಕ್ಷೇತ್ರ ತಲುಪಲಿದ್ದಾರೆ.

img 20240226 wa00215152807969737906448



ಇನ್ನು ಪಾದಯಾತ್ರಿಗಳು  ತಂಗುವ ಸ್ಥಳದಲ್ಲಿ ದಾನಿಗಳು ಊಟದ ವ್ಯವಸ್ಥೆಯನ್ನು ಮಾಡಲಿದ್ದಾರೆ.

img 20240226 wa00203756287668523517661



ಇದೆ ವೇಳೆ ಜೆಡಿಎಸ್ ಮುಖಂಡರಾದ ಚೆನ್ನೇನಹಳ್ಳಿ ನರಸಿಂಹಮೂರ್ತಿ , ಎಂ ಎಲ್ ಜಗದೀಶ್ ಸಿ ಎಸ್ ಪುರ ಹೋಬಳಿ ಜೆ ಡಿ ಎಸ್ ಅಧ್ಯಕ್ಷರು, ವೆಂಕಟಪುರ ಯೋಗೀಶ್ ,ವೀರಣ್ಣ ಗುಡಿ ರಾಮು, ತಮ್ಮಯ್ಯ, ಶಶಿ, ಸ್ವಾಮಿ, ಕುಮಾರ್, ಅನೇಕರು ಉಪಸ್ಥಿತರಿದ್ದರು.

ವರದಿ: ಮಂಜುನಾಥ್ ತುರುವೇಕೆರೆ

https://youtube.com/@janataa24?si=XsFcych2GMH0O6Gv

https://www.janataa24.com/

Document

Leave a Reply

Your email address will not be published. Required fields are marked *