Janataa24 NEWS DESK
Gubbi: ಸಿಎಂ ಮತ್ತು ಡಿ.ಸಿ.ಎಂ. ಬಳಿ ಚರ್ಚಿಸುವವರಿಗೂ ಕಾಮಗಾರಿ ಸ್ಥಗಿತಗೊಳಿಸಿ– ಕೇಂದ್ರ ಸಚಿವ ವಿ. ಸೊಮಣ್ಣ.

ಗುಬ್ಬಿ : ಎಕ್ಸ್ ಪ್ರೆಸ್ ಲಿಂಕ್ ಕೆನಲ್ ಕಾಮಗಾರಿಯು ಅವೈಜ್ಞಾನಿಕವಾಗಿದ್ದು. ಸಿ,ಎಂ ಮತ್ತು ಡಿ,ಸಿ,ಎಂ, ಜೊತೆ ಚರ್ಚಿಸುವವರೆಗೂ ತಾಂತ್ರಿಕ ಸಮಿತಿಯವರು ಕಾಮಗಾರಿಯನ್ನು ಮುಂದುವರಿಸಬಾರದು ಎಂದು ಕೇಂದ್ರ ಸಚಿವ ವಿ ಸೊಮಣ್ಣ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕಿನ 70ನೇ ಕಿಲೋಮೀಟರ್ ಹೇಮವತಿ ಎಕ್ಸ್ ಪ್ರೆಸ್ ಲಿಂಕ್ ಕೆನಲ್ ಕಾಮಗಾರಿಯನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದವರು ಹೇಮಾವತಿ ನೀರಾವರಿಯು ತುಮಕೂರು ಜಿಲ್ಲೆಯ ರೈತರ ಜೀವನಾಡಿಯಾಗಿದ್ದು ತುಮಕೂರು ಭಾಗದ ರೈತರು ಹೇಮಾವತಿಗೆ ಸಂಪೂರ್ಣ ಅವಲಂಬಿತವಾಗಿದ್ದು ಸರ್ಕಾರವು ಎಕ್ಸ್ ಪ್ರೆಸ್ ಲಿಂಕ್ ಕಾಮಗಾರಿ ಯೋಜನೆಯನ್ನು ಕೈಗೊಂಡಿರುವುದು ಅವೈಜ್ಞಾನಿಕವಾಗಿದೆ. ಹೇಮಾವತಿ ಲಿಂಕ್ ಕೆನಾಲ್ ತಾಂತ್ರಿಕ ಅಧಿಕಾರಿಗಳು ಇಲ್ಲಿನ ವಾಸ್ತವಂಶವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ರೈತರು ದೇಶದ ಬೆನ್ನೆಲುಬು. ಸರ್ಕಾರದ ಅಳಿವು ಉಳಿವು ರೈತರ ಕೈಯಲ್ಲಿದೆ ಹಾಗಾಗಿ ಸಿಎಂ ಮತ್ತು ಡಿಸಿಎಂ ಜೊತೆ ಚರ್ಚಿಸುವವರೆಗೂ ತಾಂತ್ರಿಕ ಸಮಿತಿಯ ಅಧಿಕಾರಿಗಳು ಕಾಮಗಾರಿಯನ್ನು ಮುಂದುವರಿಸಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್, ಮಾಜಿ ಸಂಸದ ಜಿ,ಎಸ್ ಬಸವರಾಜು, ಮಾಜಿ ಶಾಸಕ ಸುಧಾಕರ್ ಲಾಲ್, ವೈ ಎಚ್ ಹುಚ್ಚಯ್ಯ, ಎಸ್ ಡಿ,ದಿಲೀಪ್ ಕುಮಾರ್, ಬಿ,ಎಸ್ ನಾಗರಾಜು, ಚಂದ್ರಶೇಖರ ಬಾಬು, ಕಳ್ಳಿಪಾಳ್ಯ ಲೋಕೇಶ್ ಸೇರಿದಂತೆ ಸಹಸ್ರಾರು ರೈತರು ಹಾಜರಿದ್ದರು.
ವರದಿ: ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.