Document

ಗ್ರಾ ಪಂ ಸದಸ್ಯರು ಪಿಡಿಒ ವಿರುದ್ಧ ಬೇಸರ ವ್ಯಕ್ತ:15ನೇ ಹಣಕಾಸು ಕ್ರಿಯಾ ಯೋಜನೆಯಲ್ಲಿ ಗೋಲ್-ಮಾಲ್ .

Janataa24 NEWS DESK


IMG 20240111 WA0001


ಗುಬ್ಬಿ: ತಾಲೂಕಿನ ಕಲ್ಲೂರು ಗ್ರಾಮ ಪಂಚಾಯಿತಿಯಲ್ಲಿ 19 ಸದಸ್ಯರೊಂದಿದ್ದು ಇದರಲ್ಲಿ ಒಂಬತ್ತು ಜನ ಸದಸ್ಯರ ವಿರೋಧವಾಗಿ ಪಿಡಿಒ 15 ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ ಪಟ್ಟಿಯನ್ನು ತಯಾರಿಸಿದ್ದು ಇದರಲ್ಲಿ 9 ಜನ ಸದಸ್ಯರ ವಾರ್ಡ್ ಗಳಿಗೆ ಅಥವಾ ಗ್ರಾಮಗಳಿಗೆ ಸ್ವಚ್ಛತೆ,ಅಭಿವೃದ್ಧಿ, ಕುಡಿಯುವ ನೀರು ಹಾಗೂ ಇತರೆ ಸಾಮಗ್ರಿ ವೆಚ್ಚಗಳಿಗೆ ಹಣವನ್ನು ಬಳಕೆ ಮಾಡದೆ ತಮ್ಮ ಇಷ್ಟದಂತೆ ಅನುದಾನ ಬಳಕೆ ಮಾಡುತ್ತಿರುವುದು ನಮಗೆಲ್ಲ ಬೇಸರ ತಂದಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ನೇರ ಆರೋಪವಾಗಿದೆ.

IMG 20240111 WA0002



ಕಲ್ಲೂರು ಏ ಕೆ ಕಾಲೋನಿಗೆ ಸ್ವಚ್ಛತೆ ಹಾಗೂ ಕುಡಿಯುವ ನೀರು ಮತ್ತು ಬೀದಿ ದೀಪಗಳ ಅಳವಡಿಕೆ ಅನುದಾನ ನೀಡದೆ ದಲಿತ ಸದಸ್ಯ ಎಂಬ ಕಾರಣಕ್ಕೆ ನನ್ನನ್ನು ಕಡೆಗಣಿಸುತ್ತಿದ್ದಾರೆ ನಾನು ಗ್ರಾಮ ಪಂಚಾಯಿತಿಗೆ ತೆರಳಿದರೆ ನನಗೆ ಗೌರವ ನೀಡದೆ ಹಗುರವಾಗಿ ನಡೆದುಕೊಳ್ಳುತ್ತಾರೆ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಕೆ ಎಲ್ ರವಿಕುಮಾರ್ ರವರು ತಮ್ಮ ನೋವನ್ನು ತೋಡಿಕೊಂಡರು.

15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ ಪಟ್ಟಿಯನ್ನು ತಯಾರಿಸುವಾಗ ನಮ್ಮಗಳ ಗಮನಕ್ಕೆ ಬಾರದೆ ಅಭಿವೃದ್ಧಿ ಅಧಿಕಾರಿ ತಮ್ಮ ಇಷ್ಟಾರ್ಥ ಅನುಕೂಲಕ್ಕೋಸ್ಕರ ಕ್ರಿಯಾ ಯೋಜನೆ ಪಟ್ಟಿಯನ್ನು ತಯಾರಿಸಿದ್ದಾರೆ ಇದನ್ನು ಪ್ರಶ್ನೆ ಮಾಡಿದರೆ ನಮಗೆ ಇಲ್ಲಸಲ್ಲದ ಕಾರಣಗಳನ್ನು ಹೇಳಿ ಹರಕೆ ಉತ್ತರ ನೀಡುತ್ತಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಂಗನಾಥ್ ತಿಳಿಸಿದರು.


15ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆ ಪಟ್ಟಿಯನ್ನು ತಯಾರಿಸಲು ಗ್ರಾಮ ಪಂಚಾಯಿತಿ ಸಭೆಯಲ್ಲಿ 9 ಜನ ಸದಸ್ಯರು ವಿರೋಧ ವ್ಯಕ್ತಪಡಿಸಿದರು ಪಿಡಿಒ ಏಕಾಏಕಿಯಾಗಿ ನಮ್ಮಗಳನ್ನು ಕಡೆಗಣಿಸಿ ಪಟ್ಟಿಯನ್ನು ತಯಾರಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಬಳಿಕೆ ಮಾಡಿದೆ ಸಂಬಂಧ ಪಡೆದಿರುವ ಜಾಗದ ಕಾಮಗಾರಿಗೆ ಅನುದಾನ ನೀಡಿರುತ್ತಾರೆ ಎಂದು ಸದಸ್ಯರ ಆರೋಪವಾಗಿದೆ.

ಸೋಲಾರ್ ಅಳವಡಿಸಲು ಸರ್ಕಾರದ ಆದೇಶ ಇಲ್ಲದಿದ್ದರೂ ಸೋಲಾರ್ ಹಾಕಲು ಪಿಡಿಒ ಮುಂದಾಗಿದ್ದಾರೆ

ಸಾಮಗ್ರಿಗಳ ವೆಚ್ಚಕ್ಕೆ ಅತಿ ಹೆಚ್ಚು ಅನುದಾನ ತೆಗೆದಿದ್ದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಮ್ಮ ಜೇಬನ್ನು ತುಂಬಿಸಿಕೊಳ್ಳಲು ಮುಂದಾಗಿದ್ದಾರೆ


ದಲಿತ ಸದಸ್ಯನೆಂಬ ಕಾರಣಕ್ಕೆ ನನ್ನನ್ನು ಕಡೆಗಣಿಸಿ ನನ್ನ ಮತ ಕ್ಷೇತ್ರವನ್ನು ಕಡೆಗಣಿಸಿ ಮನಸು ಇಚ್ಚೆಯಂತೆ ಕ್ರಿಯಾ ಯೋಜನೆ ಪಟ್ಟಿಯನ್ನು ತಯಾರಿಸಿದ್ದಾರೆ

-ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಲ್ ರವಿಕುಮಾರ್

15ನೇ ಹಣಕಾಸು ಕ್ರಿಯಾ ಯೋಜನೆ ಪಟ್ಟಿಯನ್ನು ತಯಾರಿಸುವಾಗ ಎಲ್ಲಾ ಸದಸ್ಯರ ಓಮ್ಮತವನ್ನು ಪಡೆಯದೆ ಪಟ್ಟಿಯನ್ನು ತಯಾರಿಸಿದ್ದಾರೆ
-ಗ್ರಾಮ ಪಂಚಾಯತಿ ಸದಸ್ಯ ರಂಗನಾಥ

15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ ಪಟ್ಟಿಯನ್ನು ತಯಾರಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಅಧಿಕಾರ ಇದೆ ನನಗೆ ಯಾವುದೇ ರೀತಿ ಅಧಿಕಾರವಿಲ್ಲ

-ತಾಲೂಕು ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿಗಳಿಗೆ 15ನೇ ಹಣಕಾಸು ಕ್ರಿಯಾ ಯೋಜನೆ ಮೊತ್ತವನ್ನು ತಡೆ ಹಿಡಿದು ತನಿಖೆ ಮಾಡಿ ಪುನರ್ ನಿರ್ಮಾಣ ಪಟ್ಟಿಯನ್ನು ಮಾಡಬೇಕೆಂದು ಅರ್ಜಿ ಸಲ್ಲಿಸಿದರು ಯಾವುದೇ ರೀತಿ ಪ್ರಯೋಜನವಾಗಿಲ್ಲ

ಗ್ರಾಮ ಪಂಚಾಯಿತಿ ಸದಸ್ಯರು.

ವರದಿ

ಗುಬ್ಬಿ: ಶ್ರೀಕಾಂತ್

Document

Leave a Reply

Your email address will not be published. Required fields are marked *