JANATAA24 NEWS DESK
Badami: ಬಗರ್ ಹುಕುಂ ಸಾಗುವಳಿದಾರರ ರೈತರಿಗೆ ಹಕ್ಕು ಪತ್ರ ಹಾಗೂ ಆಕಾರಪಟ್ಟಾ ಕೊಡಿಸಿಕೊಡುವ ಕುರಿತು ತಾಲೂಕು ದಂಡಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಬಾದಾಮಿ: ಬಗರ್ ಹುಕುಂ ಸಾಗುವಳಿದಾರರಿಗೆ ಈಗಾಗಲೇ ಮಾನ್ಯ ಅಂಡರ್ ಸೆಕ್ರೆಟರಿ ಅಗ್ರಿಕಲ್ಚರ್ ಹಾಗೂ ಫಾರೆಸ್ಟ್ ಡಿಪಾರ್ಟ್ ಮೆಂಟ್ ಬೆಂಗಳೂರು ಇವರ ಆದೇಶ ನಂ.AFD-452 FGL -70 Dated 29/01/1971 ರ ಪ್ರಕಾರ ಮಂಜೂರಾಗಿ ಡಿಸ್ ಫಾರೆಸ್ಟ್ ಆಗಿದ್ದು.. ಇಷ್ಟಾದರೂ ಸಹಿತ ಸರಕಾರ ಬಗರ್ ಹುಕುಂ ಸಾಗುವಳಿದಾರರ ರೈತರಿಗೆ ಹಕ್ಕು ಪತ್ರ ಆಕಾರ ಪಟ್ಟಾ ನೀಡದಿರುವುದು ಸಾಗುವಳಿದಾರರಿಗೆ ಜೀವನ ನಡೆಸಲು ಆರ್ಥಿಕ ಸಂಕಷ್ಟ ಎದುರಾಗಿವೆ.
ಈ ಕುಟುಂಬಗಳು ಜೀವನ ನಡೆಸಲು ಆರ್ಥಿಕ ಬಲ ಇಲ್ಲದೆ ಒದ್ದಾಡುವ ಸ್ಥಿತಿಗೆ ಬಂದು ತಲುಪಿವೆ.. ಇವೆಲ್ಲವನ್ನೂ ಸರಕಾರ ನೋಡಬೇಕಿದೆ ಬಗರ್ ಹುಕುಂ ಸಾಗುವಳಿದಾರ ರಾದ ನಮಗೆ ಆದಷ್ಟು ಬೇಗನೆ ಹಕ್ಕು ಪತ್ರ ಹಾಗೂ ಆಕಾರ ಪಟ್ಟಾ ವಿತರಿಸಿ ನಮ್ಮ ಜೀವನಕ್ಕೆ ಒಂದು ದಾರಿ ಮಾಡಿ ಕೊಡಬೇಕು ಎಂದು ಬಾದಾಮಿ ಘಟಕದ ಬಗರ್ ಹುಕುಂ ಸಾಗುವಳಿದಾರರು ಬಾದಾಮಿ ತಾಲೂಕಾ ದಂಡಾಧಿಕಾರಿ( ತಹಶೀಲ್ದಾರ್) ಅವರಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಎಂ.ಕೆ.ಗಾಣಿಗೇರ,ರಾಜ್ಯ ಉಪಾಧ್ಯಕ್ಷರು ಬಗರ್ ಹುಕುಂ ಸಾಗುವಳಿ ಸೇವಾಸಮಿತಿ,ಸುರೇಶ್ ಪಾತ್ರೋಟಿ,ರಾಮನಗೌಡ ಗೌಡ್ರ,ದುರಗಪ್ಪ,ಬಸವರಾಜ್ ಬಂಡಿವಡ್ಡರ ಇನ್ನೂ ಅನೇಕ ರೈತರು ಜೊತೆಗೂಡಿ ಮನವಿ ಸಲ್ಲಿಸಿದರು.
ವರದಿ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.