Document

8 ಐಎಎಸ್ ಅಧಿಕಾರಿಗಳ
ವರ್ಗಾವಣೆ

Janataa24 NEWS DESK

uy 1686913084179 1686913089711

ಬೆಂಗಳೂರು: ಎಂಟು ಐಎಎಸ್ ಅಧಿಕಾರಿಗಳನ್ನು

ವರ್ಗಾವಣೆ ಮಾಡಿ, ಹುದ್ದೆ ನಿರೀಕ್ಷೆಯಲ್ಲಿದ್ದ ಐವರು ಐಎಎಸ್‌ ಅಧಿಕಾರಿಗಳಿಗೆ ಹುದ್ದೆ ನೀಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಹುದ್ದೆ ನಿರೀಕ್ಷೆಯಲ್ಲಿದ್ದ ನವೀನ್‌ ರಾಜ್‌ಸಿಂಗ್ ಅವರನ್ನು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಬಿಬಿಎಂಪಿ ವಿಶೇಷ ಆಯುಕ್ತ (ಚುನಾವಣೆ) ಉಜ್ವಲ್‌ ಕುಮಾರ್ ಘೋಷ್ ಅವರಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಆಯುಕ್ತರ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.



ಹುದ್ದೆ ನಿರೀಕ್ಷೆಯಲ್ಲಿದ್ದ ಸುಷ್ಮಾ ಗೋಡ್‌ಬೋಲೆ ಅವರನ್ನು ಮೌಲ್ಯಮಾಪನ ಪ್ರಾಧಿಕಾರದ ಮುಖ್ಯ ಮೌಲ್ಯಮಾಪನ ಅಧಿಕಾರಿ, ಯಶವಂತ್ ವಿ. ಗುರುಕರ್ ಅವರನ್ನು ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್‌ನ ಕಾರ್ಯನಿರ್ವಾಹಕ

ನಿರ್ದೇಶಕರಾಗಿ ನೇಮಿಸಲಾಗಿದೆ.

ವರ್ಗಾವಣೆಯಾದವರು:

ಡಿ.ಎಸ್. ರಮೇಶ್ ನಿರ್ದೇಶಕ, ತೋಟಗಾರಿಕೆ ಇಲಾಖೆ ಸತೀಶ ಬಿ.ಸಿ.- ಜಂಟಿ ನಿರ್ದೇಶಕ (ಆಡಳಿತ), ಆಡಳಿತ ಮತ್ತು ಆಡಳಿತ ಸುಧಾರಣಾ ಇಲಾಖೆ

ಪೊಮ್ಮಲ ಸುನಿಲ್‌ಕುಮಾರ್- ಅಯುಕ್ತ, ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರ

ತರಬೇತಿ ಸಂಸ್ಥೆ, ಮೈಸೂರು

ಎಚ್.ಎನ್. ಗೋಪಾಲಕೃಷ್ಣ ಆಯುಕ್ತ, ಕಾರ್ಮಿಕ ಇಲಾಖೆ

ಎಂ.ಆರ್. ರವಿಕುಮಾರ್ – ವ್ಯವಸ್ಥಾಪಕ ನಿರ್ದೇಶಕ,

ಮೈಸೂರು ಸಕ್ಕರೆ ಕಂಪನಿ

ಸಿ.ಎನ್‌. ಮೀನಾ ನಾಗರಾಜ್- ಜಿಲ್ಲಾಧಿಕಾರಿ,

ಚಿಕ್ಕಮಗಳೂರು

ಕೆ. ಅನಂದ – ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಕ್ಷಿಣ ಕನ್ನಡ

ಜಯವಿಭವ ಸ್ವಾಮಿ ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ರಾಜ್ಯ ಖನಿಜ ನಿಗಮ

ಜಿ. ಪ್ರಭು – ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತುಮಕೂರು

ಉಕೇಶ್ ಶುಮಾರ್ – ಉಪ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ.

Document

Leave a Reply

Your email address will not be published. Required fields are marked *