ಸರ್ಕಲ್ ಮಾರಮ್ಮನ ಅದ್ದೂರಿ ಜಾತ್ರಾ ಮಹೋತ್ಸವ.

ತುರುವೇಕೆರೆ: ಮಂಜುನಾಥ್

ತುರುವೇಕೆರೆ ತಾಲೂಕಿನ ಕೋಡಿ ನಾಗಸಂದ್ರ ಟಿಬಿ ಕ್ರಾಸ್ ನಲ್ಲಿ ಇಂದು ಶ್ರೀ ಸರ್ಕಲ್ ಮಾರಮ್ಮ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವವನ್ನು ಊರಿನ ಮುಖಂಡರಾದ ಸಣ್ಣ ನರಸಯ್ಯ, ನಿಂಗಣ್ಣ, ಬೈರಪ್ಪಾಜಿ, ಇವರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿಸಲಾಯಿತು, ಇನ್ನು ಊರಿನ ಪ್ರಮುಖ ಬೀದಿಯಲ್ಲಿ ದೇವಿಯ ಉತ್ಸವವನ್ನು ನಡೆಸಲಾಯಿತು, ಜೊತೆಗೆ ಊರಿನ ಗ್ರಾಮಸ್ಥರ ಎಲ್ಲ ಸೇರಿ ಶ್ರೀ ಸರ್ಕಲ್ ಮಾರಮ್ಮ ದೇವಿಯ ದೇವಸ್ಥಾನದ ಹತ್ತಿರ ಜಮಾಾವಣೆಗೊಂಡು, ಈ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿದರು ಇನ್ನು ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪರಮೇಶ್.ರಂಜಿತ್, ಶಶಿ, ಶಿವರಾಜ್ ,ರಘು (ಡಿಡಿ) ರಾಜಣ್ಣ, ಮಂಜುನಾಥ್ (ಕೋನ) ಯೋಗೀಶ್, ಇನ್ನು ಅನೇಕ ಮಹಿಳೆಯರು ಈ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.


