Document

ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾರೆ: ಯಶ್ವಂತ್ ಗುರೂಜಿ.

Janataa24 NEWS DESK

VideoCapture 20230517 134121



ತುಮಕೂರು: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತಾರೆ ಅಂತಾ ನೊಣವಿನಕೆರೆಯ ಡಾ. ಯಶ್ವಂತ ಗುರೂಜಿ ಭವಿಷ್ಯ ನುಡಿದಿದ್ದಾರೆ.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿರುವ ಯಶ್ವಂತ ಗುರೂಜಿ, ಕಾಂಗ್ರೆಸ್ ಪಕ್ಷಕ್ಕೆ ಸ್ವಷ್ಟ ಬಹುಮತ ಬಂದಿದೆ. 135 ಸ್ಥಾನಗಳು ಸಿಕ್ಕಿವೆ. ಈ ವಿಚಾರವನ್ನ ಕಾಂಗ್ರೆಸ್‌ನ ಅಲೆ ಇಲ್ಲದೆ ಇದ್ದಂತಹ ಸಮಯದಲ್ಲೇ ನಾವು ಹೇಳಿದ್ದೆವು. ಕಾಂಗ್ರೆಸ್ ಸ್ಪಷ್ಟ ಬಹುಮತದ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲಿದೆ ಅಂತಾ. ಇದೀಗ ಸಿ.ಎಂ ಘೋಷಣೆ ಇನ್ನೂ ಆಗಿಲ್ಲ. ಹಗ್ಗಾ-ಜಗ್ಗಾಟ ನಡೆಯುತ್ತಿದೆ. ಈ ಮುಂಚೆಯೇ ಹೇಳ್ತಿದ್ದೇವೆ. ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ ಅಂತಾ ಗುರೂಜಿ ಸ್ಪಷ್ಟನೆ ನೀಡಿದರು.



ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಮೇ.‌ 30ರವರೆಗೆ ಅಧಿಕಾರದ ಯೋಗವಿದೆ. ಈ ಅವಧಿ ಮುಗಿದರೆ ಮತ್ತೆ 1 ವರ್ಷ 8 ತಿಂಗಳ ಕಾಲ ಮುಖ್ಯಮಂತ್ರಿ ಆಗುವ ಯೋಗ ಇರಲ್ಲ ಎಂದು ಗುರೂಜಿ ಖಡಕ್ಕಾಗಿ ನುಡಿದಿದ್ದಾರೆ.



ಪ್ರತಿ ವರ್ಷ ಮಕರ ಸಂಕ್ರಾಂತಿ ಪರ್ವ ಕಾಲದಲ್ಲಿ ಕಾಲ ಜ್ಞಾನ ತೆಗೆದು ನೋಡುತ್ತೇವೆ. ಅದರಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಭವಿಷ್ಯವನ್ನೂ ಕೂಡ ನೋಡ್ತೇವೆ. ಅದರಲ್ಲಿನ ಎಲ್ಲಾ ಅಂಶಗಳು ಕೂಡ ನಿಜ ಆಗಿದೆ ಎಂದು ಗುರೂಜಿ ಸ್ಪಷ್ಟನೆ ನೀಡಿದರು.



ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡ ಸಿಎಂ ಗಾದಿಯಿಂದ ಕೆಳಗಿಳಿಯುತ್ತಾರೆ ಅಂತಾ ಭವಿಷ್ಯವನ್ನು ನುಡಿಯಲಾಗಿತ್ತು. ಅದರಂತೆ ನಿಜ ಆಗಿದೆ. ಕರೋನಾ ಮಹಾ ಮಾರಿ ಬಗ್ಗೆ, ರಮೇಶ್ ಜಾರಕಿಹೋಳಿಗೆ ಹೆಣ್ಣಿನ ಕಂಟಕ ಇರುವ ಬಗ್ಗೆ ಭವಿಷ್ಯ ನುಡಿದಿದ್ದರು. ಇವೆಲ್ಲವೂ ಸತ್ಯ ಆಗಿದೆ. ಹಾಗೆಯೇ ಸಿದ್ದರಾಮಯ್ಯ ಅವರು ಕೂಡ ಈ ಬಾರಿ ಮತ್ತೊಮ್ಮೆ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸುವುದು ಕೂಡ ಅಷ್ಟೇ ಸತ್ಯ ಅಂತಾ ಭವಿಷ್ಯ ಹೇಳಿದ್ದಾರೆ.

ಯಶ್ವಂತ ಗುರೂಜಿ: ನೊಣವಿನಕೆರೆ.

ವರದಿ

ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *