Janataa24 NEWS DESK
ತುರುವೇಕೆರೆ
ತುರುವೇಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಭರ್ಜರಿ ಪ್ರಚಾರ.

ತುರುವೇಕೆರೆ ತಾಲೂಕಿನ ಸೂಳೆಕೆರೆ ಗ್ರಾಮದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ, ದೇವರಿಗೆ ಪೂಜೆ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕರಾದ ಎಂ ಟಿ ಕೃಷ್ಣಪ್ಪ ಅವರು ತೆರೆದ ವಾಹನದಲ್ಲಿ ಮತಯಾಚನೆ ಪ್ರಾರಂಭಿಸಿದರು.

ಇನ್ನೂ ಈ ಪ್ರಚಾರದ ಕಾರ್ಯಕ್ರಮದಲ್ಲಿ ನೂರಾರು ಸೂಳೆಕೆರೆ ಗ್ರಾಮದ ಜೆಡಿಎಸ್ ಕಾರ್ಯಕರ್ತರು, ಹಾಗೂ ಬೈಕ್ ರ್ಯಾಲಿ ಪಾಲ್ಗೊಳ್ಳಲು ಆಗಮಿಸಿದ, ಸಾವಿರಾರು ಜೆಡಿಎಸ್ ಕಾರ್ಯಕರ್ತರು.
ಬೈಕ್ ರ್ಯಾಲಿ ಮಾಡುವ ಮುಖಾಂತರ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂಟಿ ಕೃಷ್ಣಪ್ಪ ಅವರ ಪರ,
ಸೂಳೆಕೆರೆ ಗ್ರಾಮದಲ್ಲಿ ಪಟಾಕಿ ಸಿಡಿಸಿ,
ಜೆಡಿಎಸ್ ಪರ ಜೈಕಾರ ಕೂಗುತ್ತಾ ಮತಯಾಚನೆ ಮಾಡಿದರು.
ವರದಿ
ತುರುವೇಕೆರೆ:ಮಂಜುನಾಥ್