Janataa24 NEWS DESK

RBI FINANCIAL QUIZ COMPETITION ” ಸ್ಪರ್ಧೆಯಲ್ಲಿ ಬ್ಲಾಕ್ (ತಾಲ್ಲೂಕು ಮಟ್ಟ) ಹಂತದಲ್ಲಿ ಕುಮಾರಿ ಚೈತನ್ಯ ಕೆ ಎಸ್, ಹಾಗೂ ಉಷಾ ಸಿ ಜೆ ,ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ.
ತುರುವೇಕೆರೆ: ಮಾಯಸಂದ್ರ ಹೋಬಳಿ, ತುರುವೇಕೆರೆ ತಾಲೂಕು ,ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಣೆ ಚೆಂಡೂರು ಇಲ್ಲಿ ವ್ಯಾಸಂಗ ಮಾಡುತ್ತಿರುವ ಈ ಇಬ್ಬರು ವಿದ್ಯಾರ್ಥಿನಿಯರು,

ಜಿಲ್ಲಾ ಪಂಚಾಯತ್ ತುಮಕೂರು, ಉಪನಿರ್ದೇಶಕರು (ಆಡಳಿತ ),ಹಾಗೂ ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿಗಳ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ, ತುಮಕೂರು ಜಿಲ್ಲೆ ,
ಆಯೋಜಿಸಿದ ದಿನಾಂಕ 23/06./2023ರ ಶುಕ್ರವಾರದಂದು ನಡೆದ ಆರ್ ಬಿ ಐ ಫೈನಾನ್ಸಿಯಲ್ ಕ್ವಿಜ್ ಕಾಂಪಿಟೇಶನ್ ನಲ್ಲಿ, ತಾಲೂಕು ಮಟ್ಟದ ಹಂತದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜೇತರಾದ ವಿದ್ಯಾರ್ಥಿನಿಯರಿಗೆ ಶಾಲೆಯ ಪ್ರಾಂಶುಪಾಲರಾದ ಗದಗಯ ಹಿರೇಮಠ್, ಹಾಗೂ ಶಿಕ್ಷಕರಿಂದ, ಮತ್ತು ಸಿಬ್ಬಂದಿ ವರ್ಗ, ವಿದ್ಯಾರ್ಥಿ ವೃಂದದ, ವತಿಯಿಂದ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ವರದಿ
ತುರುವೇಕೆರೆ: ಮಂಜುನಾಥ್