Janataa24 NEWS DESK

21.01.2 ತಾಲ್ಲೂಕು ಘಟಕಗಳ ನೇತೃತ್ವದಲ್ಲಿ “OPS ಹಕ್ಕೊತ್ತಾಯ ಚಿಂತನಾ ಸಭೆ” ಯನ್ನು ಹಮ್ಮಿಕೊಳ್ಳಲಾಗಿತ್ತು.
ಪಾವಗಡ: ಪಟ್ಟಣದಲ್ಲಿ ಭಾನುವಾರ ಅಂಬೇಡ್ಕರ್ ಪುತ್ಥಳಿ ಮುಂದೆ ವಿವಿಧ ಇಲಾಖೆಯ ಎನ್.ಪಿ.ಎಸ್ ನೌಕರರು ಮಾನ್ಯ ಚಿಂತನಾ ಸಭೆ ಹಮ್ಮಿಕೊಂಡು ಸರ್ಕಾರದ ವಿರುದ್ಧ ಘೋಷಣೆ ಕೊಗುತ್ತ ಮುಖ್ಯಮಂತ್ರಿಯವರು ದಿನಾಂಕ:06.01.2024 ರಂದು ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮುಂದಿನ ಸಂಪುಟ ಸಭೆಯಲ್ಲಿ NPS ಯೋಜನೆಯ ರದ್ದತಿಯ ವಿಷಯವನ್ನು ಮಾನ್ಯ ಉಪ ಮುಖ್ಯಮಂತ್ರಿಯವರೊಂದಿಗೆ ಹಾಗೂ ಸಚಿವ ಸಂಪುಟದ ಸಹದ್ಯೋಗಿಗಳೊಂದಿಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿರುವುದು ಈಗಾಗಲೇ ತಮ್ಮ ಗಮನಕ್ಕೆ ಬಂದಿರುತ್ತದೆ.

ಮುಂದುವರೆದು, ದಿನಾಂಕ:07.01.2024 ರಂದು ನಡೆದ ಸಂಘದ ವರ್ಚುವೆಲ್ ಸಭೆಯ ನಿರ್ಣಯದಂತೆ ಸಂಪುಟ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಮನವಿ ಸಲ್ಲಿಸುವ ಅಭಿಯಾನವನ್ನು ಯಶಸ್ವಿಗೊಳಿಸುತ್ತಿರುವ ತಮಗೆ ರಾಜ್ಯ ಸಂಘವು ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಪ್ರಸ್ತುತ ದಿನಾಂಕ:18.01.2024 ರಂದು ನಡೆದ ಸಂಘದ ವರ್ಚುವೆಲ್ ಸಭೆಯಲ್ಲಿ ಮೇಲಿನ ಅಭಿಯಾನವನ್ನು NPS ರದ್ದುಗೊಳಿಸುವ ವಿಷಯವನ್ನು ಸಚಿವ ಸಂಪುಟವು ಅನುಮೋದಿಸುವವರೆಗೂ ಮುಂದುವರೆಸುವುದು ಎಂದು ನಿರ್ಧರಿಸಲಾಗಿದೆ.

ರಾಜ್ಯ ಸಂಘದ ನಿರ್ದೇಶನದ ಮೇರೆಗೆ ರಾಜ್ಯ ಜಿಲ್ಲಘಟಕದ ನಡೆ ತಾಲೂಕು ಕಡೆ ಎಂಬ ಹಕ್ಕೊತ್ತಾಯ ಚಿಂತನ ಸಭೆ ಯನ್ನು ರಾಜ್ಯ ಮಟ್ಟದಲ್ಲಿ ಏಕ ಕಾಲದಲ್ಲಿ ತಾಲ್ಲೂಕು ಮಟ್ಟ ದ ಹಕ್ಕೊತ್ತಾಯ ಚಿಂತನ ಸಭೆಯನ್ನು ಅಂಬೇಡ್ಕರ್ ಪ್ರತಿಮೆ ಮುಂದೆ ಹಮ್ಮಿಕೊಳ್ಳಲಾಯಿತು .
ಮೊದಲಿಗೆ dr B R ಅಂಬೇಡ್ಕರ್ ಪ್ರತಿಮೆ ಗೆ ಮಾಲಾರ್ಪಣೆ ಮಾಡಿ ಸಭೆ ಆರಂಭ ಮಾಡಲಾಯಿತು .
ಈ ಸಭೆಯಲ್ಲಿ ತಾಲ್ಲೂಕು NPS ಘಟಕ ದ ಅಧ್ಯಕ್ಷರು ಆದ ಮಂಜುನಾಥ್ S,ಕಾರ್ಯದರ್ಶಿ ಬೊಮ್ಮಣ್ಣ ,ಮತ್ತು ಪದಾಧಿಕಾರಿಗಳು ಜಿಲ್ಲಾ ಉಪಾಧ್ಯಕ್ಷರು ಆದ ವಸಂತ ಕುಮಾರ.ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ. ಅಧ್ಯಕ್ಷರು ಆದ ಶ್ರೀನಿವಾಸಲು ಕಾರ್ಯದರ್ಶಿ.ನಾಗೇಂದ್ರ. ಉಪಾಧ್ಯಕ್ಷ .ರಿಜ್ವಾನ್ ಮತ್ತು ತಾಲ್ಲೂಕು ಪ್ರೌಡ ಶಿಕ್ಷಕರ ಸಂಘದ ಅಧ್ಯಕ್ಷರು ಶ್ರೀ ಕೃಷ್ಣ.ಜಿಲ್ಲಾ ಅಧ್ಯಕ್ಷರು ಅದ ಯತಿ ಕುಮಾರ್
ಸಾವಿತ್ರಿ ಬಾಯಿ ಪೂಲೆ ಸಂಘದ ಪದಾಧಿಕಾರಿಗಳು ಶಾಂತ ಕುಮಾರಿ ಮತ್ತು GPT ಸಂಘದ ಪದಾಧಿಕಾರಿಗಳು ಆದ ಗಂಗಯ್ಯ.ಅರ್ಚನಾ ಮತ್ತು
KEB ಸಂಘದ ಪದಾಧಿಕಾರಿಗಳು ಆದ ಗಂಗಪ್ಪ ಮತ್ತು ತಾಲ್ಲೂಕಿನ ಎಲ್ಲಾ ಇಲಾಖೆಗಳ NPS ನೌಕರರು ಹಾಜರಿದ್ದರು.
ವರದಿ: ಇಮ್ರಾನ್ ಉಲ್ಲಾ.ಪಾವಗಡ