ಬೆಳಗಾವಿ: ರವಿ ಬಿ ಕಾಂಬಳೆ

ಬೆಳಗಾವಿಯ ಚಳಿಗಾಲ ಈ ಅಧಿವೇಶನದಲ್ಲಿ ಹಲವು ಮುಖ್ಯ ಮಸೂದೆಗಳು ಮಂಡನೆಯಾಗುತ್ತಿದ್ದು ಅದರಲ್ಲಿ ಮುಖ್ಯವಾಗಿ Sc St ಮೀಸಲಾತಿಯ ಹೆಚ್ಚಳವು ಕೂಡಾ ಎಂದರು.

ಬೆಳಗಾವಿಯ ಖಾಸಗಿ ಹೋಟೆಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ಸಿನವರು ಮಾಡುವ ಆರೋಪಕ್ಕೆ ಉತ್ತರ ನೀಡಿದರು..
ಎಸ್ಸಿ ಎಸ್ಟಿ ಮೀಸಲಾತಿ ಸಾಧ್ಯವಾಗದ ಮಾತು , ಮೀಸಲಾತಿ 50,% ಕ್ಕಿಂತ ಹೆಚ್ಚು ನೀಡಲು ಆಗುವದಿಲ್ಲ, ರಾಜಕೀಯ ಲಾಭಕ್ಕೆ ಬಿಜೆಪಿ ಅವರು ಈ ರೀತಿ ಆಸೆ ತೋರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪವಾಗಿತ್ತು.

ಅದಕ್ಕೆ ಉತ್ತರಿಸಿದ ಸಚಿವರು, ಕೇಂದ್ರ ಸಚಿವ ಸಂಪುಟದಲ್ಲಿ ಚರ್ಚೆ ಆಗಿ ಒಪ್ಪಿಗೆ ಪಡೆದ ನಂತರವೇ ನಾವು ಘೋಷಣೆ ಮಾಡಿದ್ದು, ಎಲ್ಲಾ ಕಾನೂನಿನ ಪ್ರಕಾರವೇ ನಡೆದಿದೆ, ಈಗ ಸದನದಲ್ಲಿಯೂ ಮೀಸಲಾತಿ ಮಸೂದೆ ಮಂಡನೆ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಜಾತಿ, ಮೀಸಲಾತಿ ಹೆಸರಿನಲ್ಲಿ ಕಾಂಗ್ರೆಸ್ ಮೊದಲಿನಿಂದಲೂ ರಾಜಕಾರಣ ಮಾಡುತ್ತ ಬಂದಿದೆ, ಅದರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದರು .