Raichur: ರಾಯಚೂರು ನಗರದಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ ಮೂರ್ತಿಯ ಲೋಕಾರ್ಪಣೆ
ರಾಯಚೂರು: ಚಂದ್ರಶೇಖರ

ರಾಯಚೂರು : ಜಿಲ್ಲಾಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ರಾಯಚೂರು ನಗರದಲ್ಲಿ ನೂತನವಾಗಿ ನಿರ್ಮಿಸಿರುವ ದಾಸ ಶ್ರೇಷ್ಟ ಭಕ್ತ ಕನಕದಾಸರ ಮೂರ್ತಿಯನ್ನು ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ(ಬೈರತಿ) ಮತ್ತು ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಸಚಿವರಾದ ಶ್ರೀ ಎಂ.ಟಿ.ಬಿ.ನಾಗರಾಜ ದಿನಾಂಕ 29-10-2022 ರಂದು ಲೋಕಾರ್ಪಣೆ ಮಾಡಿದರು ಮತ್ತು ಭಕ್ತ ಕನಕದಾಸರ ಭವನ ನಿರ್ಮಾಣಕ್ಕೆ ಪೂಜೆ ಸಲ್ಲಿಸುವ ಮೂಲಕ ಅಡಿಗಲ್ಲು ಹಾಕಿದರು.


ಈ ಶುಭ ಸಮಾರಂಭದ ಅಧ್ಯಕ್ಷತೆಯನ್ನು ರಾಯಚೂರು ಶಾಸಕರಾದ ಡಾ.ಶಿವರಾಜ್ ಪಾಟೀಲ್ ವಹಿಸಿದ್ದರು.

ಮಾಜಿ ಸಚಿವರಾದ ಶ್ರೀ ಎಚ್.ಎಂ.ರೇವಣ್ಣ, ಕೊಪ್ಪಳದ ಮಾಜಿ ಸಂಸದರಾದ ಶ್ರೀ ವಿರೂಪಾಕ್ಷಪ್ಪ ಸೇರಿದಂತೆ ಜಿಲ್ಲೆಯ ಹಲ ಜನಪ್ರತಿನಿಧಿಗಳು, ಕುರುಬ ಸಮಾಜದ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.