LOKASABHA 2024: ಮೂರನೇ ಬಾರಿ ಮೋದಿ ಪ್ರಧಾನಿಯಾಗಬೇಕು ಎಂದು ಶನೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಚಿತ್ರದುರ್ಗದ ಮಾಜಿ ಸಂಸದ ಜನಾರ್ಧನ ಸ್ವಾಮಿ(Janaradhan Swamy).

ಪಾವಗಡ: ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಿತ್ರದುರ್ಗ(Chitradurga) ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಜನಾರ್ದನ ಸ್ವಾಮಿ(Janaradhan Swamy)ಯವರು ಮೂರನೇ ಬಾರಿಯೂ ನರೇಂದ್ರ ಮೋದಿ(Narendra Modi)ಯವರೇ ಪ್ರಧಾನಿಯಾಗಲಿದ್ದಾರೆ, ಅವರು ದೇಶಕ್ಕೆ ಮಾಡಿರುವಂತಹ ಸೇವೆಗಳನ್ನು ಮತ್ತು ಅವರು ದೇಶಕ್ಕೆ ನೀಡಿರುವಂತಹ ಕೊಡುಗೆಯಿಂದಾಗಿ ಜನರು ಮೋದಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಲು ಸಿದ್ಧರಿದ್ದಾರೆ.

ಈ ಹಿಂದೆ ನಾನು ಸಂಸದನಿದ್ದಾಗ ಚಿತ್ರದುರ್ಗ(Chitradurga)ವನ್ನು ಮಾದರಿ ಲೋಕಸಭಾ ಕ್ಷೇತ್ರವನ್ನಾಗಿ ಮಾಡಿದ್ದೆ ಭಾರತದ ಅತ್ಯುನ್ನತ ಸಂಸ್ಥೆಗಳಾದ ಡಿ ಆರ್ ಡಿ ಓ ಸೇರಿದಂತೆ ಅನೇಕ ಸಂಸ್ಥೆಗಳನ್ನು ತರಲಾಗಿದ್ದು,
ನಮ್ಮ ಅವಧಿಯಲ್ಲಿಯೇ ಪಾವಗಡ ಚಳ್ಳಕೆರೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಗಳನ್ನು ಭದ್ರಾ ಮೇಲ್ದಂಡೆ ಯೋಜನೆಯ ಪಟ್ಟಿಯಲ್ಲಿ ಸೇರಿಸಿದ್ದು, ನಂತರ ಪಕ್ಷ ಈ ಬಾರಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿ ಎಂದರೆ ನಾನು ಮಾಡಲು ಬದ್ಧ ಇಂದು ಪಾವಗಡದ ಕಾರ್ಯಕರ್ತರನ್ನ ಭೇಟಿಯಾಗಿ ಮಾತನಾಡಿಸಿ ಅದೇ ರೀತಿ ಕ್ಷೇತ್ರದ ದೇವರಾದ ಶನಿ ಮಹಾತ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗಿದೆ ಎಂದರು.

ವರದಿ: ಇಮ್ರಾನ್ ಉಲ್ಲಾ ಪಾವಗಡ
https://www.janataa24.com/swami-japananda-swami-is-saving-life-by-giving-water-to-the-dumb-creatures/
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv