Document

AAP ರಾಜ್ಯ ಯುವ ಘಟಕದ ಉಪಾಧ್ಯಕ್ಷರಾಗಿ ಆನಂದ್ ದೇವಾಡಿಗ ಆಯ್ಕೆ

Janataa24 NEWS DESK

IMG 20231212 WA0002
AAP ರಾಜ್ಯ ಯುವ ಘಟಕದ ಉಪಾಧ್ಯಕ್ಷರನಗಿ ಆನಂದ್ ದೇವಾಡಿಗ ಆಯ್ಕೆ

ಬೆಂಗಳೂರು: ಆಮ್ ಆದ್ಮಿ ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷರನ್ನಾಗಿ ಯುವಚೇತನ ತೆರಿಗೆ ಸಲಹೆದಾರರಾದ ಆನಂದ್ ದೇವಾಡಿಗ ಅವರನ್ನು ಪಕ್ಷ ನೇಮಕ ಮಾಡಿತು.



ದೆಹಲಿ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷರನ್ನಾಗಿ ಯುವಚೇತನಾ ಆನಂದ ದೇವಾಡಿಗ ಆವರನ್ನು ಬೆಂಗಳೂರಿನ ಆಮ್ ಆದ್ಮಿ ಪಕ್ಷದ ಕಛೇರಿಯಲ್ಲಿ ರಾಜ್ಯ ಮಟ್ಟದ ಆಮ್ ಆದ್ಮಿ ಪಕ್ಷದ ಮುಖಂಡರು ಅಧಿಕೃತವಾಗಿ ಶಾಲು ಹಾಕಿ ಘೋಷಣೆ ಮಾಡಿದರು.

IMG 20231212 WA0003
AAP ರಾಜ್ಯ ಯುವ ಘಟಕದ ಉಪಾಧ್ಯಕ್ಷರನಗಿ ಆನಂದ್ ದೇವಾಡಿಗ ಆಯ್ಕೆ



ಆನಂದ್ ದೇವಾಡಿಗ ಅವರು ಬಾದಾಮಿ ತಾಲೂಕಾ ಆಮ್ ಆದ್ಮಿ ಪಕ್ಷದ ತಾಲೂಕಾ ಅಧ್ಯಕ್ಷರಾಗಿ ಅವರು ಉತ್ಸಾಹದಿಂದ ಪಕ್ಷ ಸಂಘಟನಾ ಚತುರತೆ ಹಾಗೂ ಯುವಕರನ್ನು ಒಗ್ಗೂಡಿಸಿ ಪಕ್ಷ ಸಂಘಟನೆ ಮಾಡುವ ಆನಂದ್ ದೇವಾಡಿಗ ಅವರ ಕಾರ್ಯ ಕ್ಷಮತೆಯನ್ನು ಪಕ್ಷ ಗಮನಿಸಿ ಆಮ್ ಆದ್ಮಿ ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರನ್ನಾಗಿ ಇಂದು ಪಕ್ಷದ ಮುಖಂಡರ ಸಮ್ಮುಖದಲ್ಲಿ ಪದೋನ್ನತಿ ನೀಡಿ ಘೋಷಣೆ ಮಾಡಿದರು.


ರಾಜ್ಯ ಯುವ ಘಟಕದ ಉಪಾಧ್ಯಕ್ಷ ಸ್ಥಾನ ಸ್ವೀಕರಿಸಿದ ನಂತರ ಆನಂದ್ ದೇವಾಡಿಗ ಅವರು ಪಕ್ಷದ ಬಗ್ಗೆ ಮಾತನಾಡಿದರು.

IMG 20231212 WA0004
AAP ರಾಜ್ಯ ಯುವ ಘಟಕದ ಉಪಾಧ್ಯಕ್ಷರನಗಿ ಆನಂದ್ ದೇವಾಡಿಗ ಆಯ್ಕೆ



ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಂಚಿತ್ ಸಹಾನಿ,, ರಾಜ್ಯ ಯುವಘಟಕದ ಅಧ್ಯಕ್ಷರಾದ ಲೋಹಿತ್ ಹನುಮಾಪುರ,, ರಾಜ್ಯ ಮಾಧ್ಯಮ ಸಲಹೆಗಾರ ಜಗದೀಶ್, ಸಧಮ್,, ರಾಜ್ಯ ದಕ್ಷಿಣ ಭಾಗದ ಯುವ ಘಟಕದ ಉಪಾಧ್ಯಕ್ಷರಾದ ಧರ್ಮದರ್ಶಿ ಸೇರಿದಂತೆ ಪಕ್ಷದ ಮಹಿಳಾ ಮುಖಂಡರು ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.

ವರದಿ: ರಾಜೇಶ್. ಎಸ್. ದೇಸಾಯಿ.

Document

Leave a Reply

Your email address will not be published. Required fields are marked *