Janataa24 NEWS DESK
ಶಾಸಕ ಎಂ.ಟಿ.ಕೃಷ್ಣಪ್ಪನವರ ಹೊರಾಟದ ಫಲವಾಗಿ ಕ್ಷೇತ್ರಕ್ಕೆ 1505 ಮನೆಗಳು ಮಂಜೂರು

ತುರುವೇಕೆರೆ: ತಾಲ್ಲೂಕಿಗೆ ಮಂಜೂರಾಗಿದ್ದ ಮನೆಗಳನ್ನು ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಮಾಡಲಾಗಿದ್ದನ್ನು ಖಂಡಿಸಿ ಸೆ.1ರಂದು ವಸತಿ ಸಚಿವರ ಮನೆಯ ಎದುರು ಪ್ರತಿಭಟನೆ ನಡೆಸುವುದಾಗಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸರ್ಕಾರವು 31.8.2023ರಂದೇ 1505 ಮನೆಗಳನ್ನು ಮಂಜೂರು ಮಾಡಿರುವ ಕಾರಣ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಮುಂದೂಡಲಾಗಿದೆಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಸಂಜೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ಬಸವ ವಸತಿ ಯೋಜನೆ ಹಾಗು ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಸರ್ಕಾರ 3375 ಹೆಚ್ಚುವರಿ ಮನೆಗಳನ್ನು 2022-23 ಸಾಲಿನಲ್ಲಿ ಮಂಜೂರು ಮಾಡಿತ್ತು.
ಆದರೆ ಸ್ಥಳೀಯ ಮಾಜಿ ಶಾಸಕ ಜಯರಾಮ್ ಎ.ಎಸ್ ಚಿತಾವಣೆಯಿಂದ ತಾಲ್ಲೂಕಿ ಮಂಜೂರಾಗಿದ್ದ ಅಷ್ಟೂ ಮನೆಗಳು ಕೈತಪ್ಪಿ ಕ್ಷೇತ್ರದ ಜನತೆಯನ್ನು ವಂಚಿಸುವ ಕೆಲಸ ಮಾಡಿದ್ದರು. ಕುಣಿಗಲ್ ಗೆ ಸದರಿ ಗುರಿಯ ಮನೆಗಳನ್ನು ಮರು ಹಚಿಕೆ ಮಾಡಲಾಗಿತ್ತು.
ಈ ಬಗ್ಗೆ ನಾನು ವಸತಿ ಸಚಿವರ ಗೃಹದ ಎದುರು ಅಪಾರ ಸಂಖ್ಯೆಯ ರೈತರು ಸಾರ್ವಜನಿಕರೊಂದಿಗೆ ತೆರಳಿ ಸೆ.1ರಂದು ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೆವು ಅಷ್ಟರಲ್ಲಿ ಸರ್ಕಾರ 31.8.2023ದಂದು ನಮ್ಮನ್ನು ಕರೆಯಿಸಿಕೊಂಡು 3375 ಮನೆಗಳ ಪೈಕಿ ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ 1505 ಹಾಗು 1870 ಮನೆಗಳನ್ನು ಕುಣಿಗಲ್ ತಾಲ್ಲೂಕಿಗೆ ನೀಡಲಾಗಿದ್ದು ಇದು ನಮ್ಮ ಹೊರಾಟದ ಫಲವಾಗಿ ಕ್ಷೇತ್ರಕ್ಕೆ ದಕ್ಕಿದ್ದು ಯೋಜನೆಯಾಗಿದ್ದು ಇದರ ಯೋಜನೆ ಅರ್ಹ ಫಲಾನುಭವಿಗಳಿಗೆ ಸಿಗಲಿ ಎಂದರು.
ಸುದ್ದಿ ಗೋಷ್ಠಿಯಲ್ಲಿ ರಾಘು, ಯೋಗೀಶ್, ಬಸವಣ್ಣ ಮತ್ತು ಕಾರ್ಯಕರ್ತರು ಇದ್ದರು.
ವರದಿ
ತುರುವೇಕೆರೆ: ಮಂಜುನಾಥ್