Janataa24 NEWS DESK
Turuvekere: ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಪರಾಭವಗೊಂಡ ಅಭ್ಯರ್ಥಿಯಿಂದ ಅಭಿನಂದನೆ.

ತುರುವೇಕೆರೆ: ಪಟ್ಟಣದ ದಬ್ಬೆಘಟ್ಟ ರಸ್ತೆಯಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರದಂದು ತಾಲೂಕು ಒಕ್ಕಲಿಗರ ಸಂಘದ ಚುನಾವಣೆ ನಡೆಯಿತು, ಈ ಚುನಾವಣೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಎರಡು ಬಣಗಳ ನಡೆದ ಪೈಪೋಟಿಯ ಚುನಾವಣೆ ಇದಾಗಿದ್ದು, ವಕೀಲರಾದ ಧನಪಾಲ್ ನೇತೃತ್ವದ ಜೈ ಶ್ರೀ ಗುರುದೇವ್ ಇವರ ಬಣ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಣಕ್ಕೆ ಇನ್ನೊಂದು ಬಣದ ಪರಾಭವೊಗೊಂಡ ಅಭ್ಯರ್ಥಿಯಾದ ಡಿ ಪಿ ವೇಣುಗೋಪಾಲ್ ಅವರು ವಿಜಯ ಗಳಿಸಿದ ಸರ್ವ ಸದಸ್ಯರಿಗೂ ಅಭಿನಂದನೆಯನ್ನು ಸಲ್ಲಿಸಿ, ನಾವು ಪರಾಭವಗೊಂಡರು ಕೂಡ ಸಮುದಾಯದ ಪ್ರಗತಿಗೆ ಶ್ರಮಿಸುತ್ತೇವೆ, ನಮಗೆ ತಮ್ಮ ಅತ್ಯಮೂಲ್ಯ ಮತವನ್ನು ನೀಡಿದ ಎಲ್ಲಾ ಮತದಾರರಿಗೆ ಧನ್ಯವಾದಗಳು ಹಾಗೂ ನಮ್ಮ ಜೊತೆ ಇದ್ದು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಗಲಿರುಲೆನ್ನದೆ ಶ್ರಮಿಸಿದ ನಮ್ಮೆಲ್ಲ ಸ್ನೇಹಿತರಿಗೆ ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚಿರಋಣಿ ಎಂಬ ಸಂದೇಶವನ್ನು ನೀಡಿದರು.
ವರದಿ: ಮಂಜುನಾಥ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.instagram.com/janataa24?igsh=aXM0Ym9zb2Y2YTRn
https://www.janataa24.com/pavagada-nss-students-can-learn-rural-values/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.