Janataa24 NEWS DESK
Pavagada: ಕಳಪೆ ಕಾಮಗಾರಿಗೆ ಅಧಿಕಾರಿಗಳೇ ಸೂತ್ರಧಾರಿಗಳು

ಪಾವಗಡ: ಪಟ್ಟಣದ ಪ್ರಮುಖ ರಸ್ತೆಯಾದ ಶಿರಾ ರಸ್ತೆಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ.
ಹಲವು ಬಾರಿ ಅಧಿಕಾರಿಗಳಿಗೆ ಎಸ್ಟಿಮೇಟ್ ಕಾಪಿ ಇದರ ಅಂದಾಜು ವೆಚ್ಚದ ಬಗ್ಗೆ ಮಾಹಿತಿ ಕೇಳಿದರು ಮಾಹಿತಿ ನೀಡಿದ ಅಧಿಕಾರಿಗಳು.
ಸುಮಾರು 50 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಎಂಬುದಾಗಿ ಮೇಲ್ನೋಟಕ್ಕೆ ತಿಳಿದು ಬರುತ್ತಿದೆ.
ಕಳೆದ ಒಂದು ವರ್ಷದಿಂದ ಈ ರಸ್ತೆ ಕಾಮಗಾರಿಯಿಂದಾಗಿ ಸಾರ್ವಜನಿಕರ ಮನೆಗಳಿಗೆ ನೀರಿನ ವ್ಯವಸ್ಥೆ ಇಲ್ಲ.
ಇದೇ ಚರಂಡಿ ರಸ್ತೆ ಬದಿಯಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಸಹಾ ಇದೆ ಆದರೆ ದಿನನಿತ್ಯ ಆಸ್ಪತ್ರೆಗೆ ಬರುವಂತೆ ರೋಗಿಗಳು ನರಕಾಯಾತನೆ ಅನುಭವಿಸುತ್ತಿದ್ದಾರೆ.
ಸ್ಥಳೀಯರು ಹೇಳಿದ ಪ್ರಕಾರ ಚರಂಡಿ ಕಳಪೆ ಕಾಮಗಾರಿ ಆಗಿದ್ದು ಕಾಮಗಾರಿಯ ನಂತರ ಸರಿಯಾದ ಕ್ಯೂರಿಂಗ್ ಮಾಡಿಲ್ಲ.
ಚರಂಡಿ ನಿರ್ಮಾಣ ಪ್ರಾರಂಭ ಮಾಡಿ ಸುಮಾರು ಒಂದು ವರ್ಷ ಕಳೆದರೂ ಪೂರ್ಣಗೊಳ್ಳುದ ಚರಂಡಿ.
ಚಂಡಿಯ ಪಕ್ಕದ ಗುಂಡಿಗಳಿಗೆ ಕಳಪೆ ಮಣ್ಣು ಹಾಕಿ ಕಾಮಗಾರಿ ಮಾಡಲಾಗುತ್ತಿದೆ.
ಪುರಸಭೆ ಮುಖ್ಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು.
ಮೇಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕಾಮಗಾರಿಯ ಬಿಲ್ಲು ಮಾಡಬೇಕು ಇಲ್ಲವಾದರೆ ಪುರಸಭೆ ಕಚೇರಿ ಮುತ್ತಿಗೆ ಹಾಕುತ್ತೇವೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಯಾವುದೇ ಕಾರಣಕ್ಕೂ ಗುತ್ತಿಗೆದಾರನ ಬಿಲ್ಲು ಮಾಡಬಾರದು ಎಂಬುದು ಸ್ಥಳೀಯರ ಆರೋಪ.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://www.janataa24.com/yogaday-yoga-is-popular-in-the-world-with-the/
Https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv