Janataa24 NEWS DESK
Accident: Two teachers died in a car accident and two were seriously injured.

ಶಿಕ್ಷಕರ ಸಮಸ್ಯೆಗಳಿಗೆ ಹೋರಾಟದ ಮುಂದಾಳತ್ವ ವಹಿಸಿ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತಿದ್ದ ಇಬ್ಬರನ್ನು ಕಳೆದುಕೊಂಡ ಶಿಕ್ಷಕರ ವೃಂದಕ್ಕೆ ಬಾರಿ ನಷ್ಟ.ಶಿಕ್ಷಕರು ಪ್ರಯಾಣಿಸುತ್ತಿದ್ದ, ಶಿಫ್ಟ್ ಕಾರು ಅಪಘಾತ ಇಬ್ಬರು ಶಿಕ್ಷಕರು ಸ್ಥಳದಲ್ಲೇ ದುರ್ಮರಣ ಇನ್ನೊಬ್ಬರಿಗೆ ಗಂಭೀರ ಗಾಯ ಬೆಂಗಳೂರಿಗೆ ರವಾನೆ.
ಪಾವಗಡ: ತುಮಕೂರಿನಲ್ಲಿ ನಡೆದಂತಹ ಮದುವೆಗೆ ಹೋಗಿ ಮರಳಿ ಪಾವಗಡಕ್ಕೆ ಬರುತ್ತಿರುವಂತಹ ಸಂದರ್ಭದಲ್ಲಿ ಪಾವಗಡ ತುಮಕೂರು ಮಾರ್ಗದ ಕಣಿವೆನಹಳ್ಳಿ ಗೇಟ್ ಬಳಿ ಇರುವ ನಯಾರ ಪೆಟ್ರೋಲ್ ಬಂಕ್(Petrol Bunk) ಸಮೀಪದಲ್ಲಿ ಕಾರೊಂದು ಪಲ್ಟಿಯಾದ ಪರಿಣಾಮ ಪಾವಗಡ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾದ ಓ ಧನಂಜಯ.55 ಮತ್ತು ಗೌಡಟ್ಟಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಕೃಷ್ಣ 45.
ಇನ್ನು ಇದೇ ವಾಹನದಲ್ಲಿದ್ದ ಶಿಕ್ಷಕರಗಳಾದ ಆರ್ ಎಂ ನರಸಿಂಹ(M Narasimha)ಮತ್ತು ವೆಂಕಟಾಚಲಪತಿ(Venkata Chalapathi) ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆಈ ನಾಲ್ಕು ಜನ ಶನಿವಾರ ರಾತ್ರಿ ತುಮಕೂರಿನಲ್ಲಿ ಶಿಕ್ಷಕರಾದ ಶೋಭಾ ಎನ್ನುವವರ ಪುತ್ರಿಯ ವಿವಾಹದ ಆರಕ್ಷತೆಯನ್ನು ಮುಗಿಸಿಕೊಂಡು ಮರಳಿ ಪಾವಗಡಕ್ಕೆ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸದ್ಯ ಪಾವಗಡ ಪಟ್ಟಣದ ಪೊಲೀಸ್(Police) ಠಾಣೆಯ ಸಿಪಿಐ ಸುರೇಶ್ ಮತ್ತು ಪೊಲೀಸರು ಸ್ಥಳದಲ್ಲಿ ಇದ್ದು ಪರಿಶೀಲಿಸಿ ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.ಮೃತ ಶಿಕ್ಷಕರ ಸಾವಿನ ವಿಷಯ ತಿಳಿದು ಸಾವಿರಾರು ಶಿಕ್ಷಕರು ಸರ್ಕಾರಿ ಆಸ್ಪತ್ರೆ ಹತ್ರ ದೌಡಾಯಿಸಿ ಬಂದಿದ್ದರು. ಸಂತಾಪ ವ್ಯಕ್ತಪಡಿಸಿದ ಸ್ಥಳೀಯ ಶಾಸಕ ಹೆಚ್. ವಿ. ವೆಂಕಟೇಶ್. ಮಾಜಿ ಸಚಿವ ವೆಂಕಟರಮಣಪ್ಪ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದಂತಹ ಇಂದ್ರಣಮ್ಮ .ಬಿ ಆರ್ ಸಿ ಗಳಾದಂತಹ ವೆಂಕಟೇಶಲು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಿಬ್ಬಂದಿಗಳಾದಂತಹ ವೇಣುಗೋಪಾಲ್ ಸಾಧಿಕ್ ಉಲ್ಲಾ ಶರೀಫ್. ಇತರೆ ಹಲವು ಮಂದಿ ಸಂತಾಪ ವ್ಯಕ್ತಪಡಿಸಿದ್ದರು.
ವರದಿ: ಇಮ್ರಾನ್ ಉಲ್ಲಾ. ಪಾವಗಡ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://www.janataa24.com/siddaramaiah-prajwal-revanna-case-need-not-be/