Janataa24 NEWS DESK
ನ್ಯಾಯದ ಗುಂಟೆ ಗ್ರಾಮ ಪಂಚಾಯತಿ ಉಪ ಚುನಾವಣೆಯಲ್ಲಿ ಎಂ ಹನುಮಂತರಾಯಪ್ಪ ಆಯ್ಕೆ ಆಗಿರುತ್ತಾರೆ.

ಪಾವಗಡ: ತಾಲೂಕಿನ ನ್ಯಾಯದ ಗುಂಟೆ ಗ್ರಾಮ ಪಂಚಾಯತಿ ಉಪ ಚುನಾವಣೆಯಲ್ಲಿ ಹನುಮಂತರಾಯಪ್ಪ ಜೆಡಿಎಸ್ ಬೆಂಬಲಿತ ಅಭ್ಯರ್ಥಿ 382 ಮತಗಳನ್ನು ಪಡೆದು ಜಯಶೀಲರಾಗಿರುತ್ತಾರೆ. ಸ್ಪರ್ದಿ ಎನ್ ವಿ ಗೋವಿಂದಪ್ಪ 312 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ.
ಈ ಹಿಂದೆ ಇದ್ದ ಸದಸ್ಯ ಮೃತ ಪಟ್ಟ ಹಿನ್ನೆಲೆಯಲ್ಲಿ ನಡೆದ ಮರು ಚುನಾವಣೆ.

ದಿನಾಂಕ 26/7/23 ರಂದು ನಡೆದ ಚುನಾವಣೆ ಒಟ್ಟು ಮತದಾರರು 699 ಇದ್ದು ಎಣಿಕೆ ಕಾರ್ಯ ಇಂದು ಬುಧವಾರ ತಾಲೂಕು ಕಚೇರಿಯಲ್ಲಿ ನಡೆಯಿತು ಏಣಿಯಲ್ಲಿ ಎಂ.ಹನಮಂತರಾಯಪ್ಪ ಜೆಡಿಎಸ್ ಬೆಂಬಲಿತ ಅಭ್ಯರ್ಥಿ 382 ಮತಗಳನ್ನು ಪಡೆದು ಆಯ್ಕೆ ಯಾಗಿರುತ್ತಾರೆ.ಪ್ರತಿಸ್ಪರ್ಧಿಎನ್.ವಿ.ಗೋವಿಂದಪ್ಪ 312 ಮತಗಳು ಮಾತ್ರ ಪಡೆದಿರುತ್ತಾರೆ.
ಚುನಾವಣಾ ಅಧಿಕಾರಿ ಯಾಗಿ ರಾಜಗೋಪಾಲ್ ವಹಿಸಿದರೆ ಸಹಾಯಕ ಚುನಾವಣಾ ಅಧಿಕಾರಿಯಾಗಿ ಬಸವರಾಜ್ ನಿರ್ವಹಿಸಿರುತ್ತಾರೆ.

ಆಯ್ಕೆಯಾದ ನೂತನ ಸದಸ್ಯರಿಗೆ ಚುನಾವಣಾ ಪತ್ರ ವಿತರಿಸಿದರು.
ಈ ವೇಳೆ ಶುಭಾಶಯಗಳು ಕೊರಿದ ಜೆಡಿಎಸ್ ಮುಖಂಡರು ಎನ್.ಎ.ಈರಣ್ಣ.ಹನಮಂತರಾಯಪ್ಪ. ದುರ್ಗಣ್ಣ.ಪ್ರವೀಣ್ ಕುಮಾರ್.ವಸಂತ್.ಕೆಂಚರಾಯ.ಗುರು ಸ್ವಾಮೀ. ನಾಗರಾಜ್.ಸುರೇಶ್.ನರಸಿಂಹ ಮೂರ್ತಿ. ಗೋವಿಂದಪ್ಪ.ಹರೀಶ್ ಇದ್ದರು.
ವರದಿ
ಪಾವಗಡ: ಇಮ್ರಾನ್ ಉಲ್ಲಾ.