Janataa24 NEWS DESK
ದಲಿತರ ಕಾಲೋನಿಯನ್ನು ಮೂಲಸೌಕರ್ಯದಿಂದ ದೂರ ಮಾಡಿದಿಯಾ ? ಲೋಕಮ್ಮನಹಳ್ಳಿ, ಪಂಚಾಯಿತಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳು.

ತುರುವೇಕೆರೆ: ತಾಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ,
ಕೋಳಘಟ್ಟ ಗ್ರಾಮದ ದಲಿತ ಕಾಲೋನಿಯು,20 ವರ್ಷಕ್ಕೂ ಹೆಚ್ಚು ಕಾಲದಿಂದ ಮೂಲಸೌಕರ್ಯದಿಂದ ವಂಚಿತವಾಗಿಯೇ ಉಳಿದಿದೆ.
ಈ ದಲಿತ ಕಾಲೋನಿಯಲ್ಲಿ ಸುಮಾರು 35ಕ್ಕೂ ಹೆಚ್ಚು ಮನೆಗಳಿದ್ದು ಈ ಮನೆಗಳಿಗೆ ಅಚ್ಚುಕಟ್ಟಾದ ಚರಂಡಿ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರುಗಳು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ,
ಇನ್ನೂ ಇದರ ಸಂಬಂಧ ಇದಕ್ಕೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ.

ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ದಲಿತರ ಕಾಲೋನಿ ಗೆ ಭೇಟಿಕೊಟ್ಟು ಕೇವಲ ಆಶ್ವಾಸನೆಯನ್ನು ಕೊಟ್ಟು ಹಿಂದಿರುಗುತ್ತಿದ್ದಾರೆ,
ಆದರೆ ಯಾವುದೇ ಅಭಿವೃದ್ಧಿಯನ್ನು ಕೂಡ ಇಲ್ಲಿ ಮಾಡಿಲ್ಲ ಹಾಗಾದರೆ ದಲಿತರನ್ನು ಮೂಲ ಸೌಕರ್ಯದಿಂದ ದೂರ ತುಳ್ಳುತ್ತಿದ್ದಾರೆಯೇ ಎಂಬುದೇ ಪ್ರಶ್ನೆ ?
ಇನ್ನು ಇಲ್ಲಿ ಗಮನಿಸಬಹುದಾದ ವಿಷಯ ಏನೆಂದರೆ ದಲಿತರು ವಾಸವಿರುವ ಜಾಗ ಸರ್ವೆ ನಂಬರ್ ನಲ್ಲಿ ಇದ್ದು , ಇಲ್ಲಿ ದಲಿತರು ಬಹಳ ವರ್ಷದಿಂದ ಇಲ್ಲಿಯೇ ವಾಸ ಮಾಡುತ್ತಿದ್ದಾರೆ.
ಇದನ್ನ ತಿಳಿದಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈ ಜಾಗಕ್ಕೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿಯನ್ನು ಕೊಡದೆ ಸುಮ್ಮನೆ ಅಭಿವೃದ್ಧಿ ಮಾಡುತ್ತೇವೆ ಎಂದು ಕಾಟಾಚಾರದ ಮಾತುಗಳನ್ನ ಆಡಿ ಹಿಂದಿರುಗುತ್ತಿದ್ದಾರೆ,
ಈಗಲಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ಕೊಟ್ಟು ದಲಿತರ ಕಾಲೋನಿಯ ಸಮಸ್ಯೆಯನ್ನು ಬಗೆಹರಿಸುವರೆ ಕಾದುನೋಡಬೇಕಾಗಿದೆ.

ವರದಿ
ತುರುವೇಕೆರೆ: ಮಂಜುನಾಥ್