ತುರುವೇಕೆರೆ: ಮಂಜುನಾಥ್

ತುರುವೇಕೆರೆ.ತಾಲೂಕಿನ ದಬ್ಬೇಘಟ್ಟ ಹೋಬಳಿಯ ಹಳ್ಳದ ಹೊಸಹಳ್ಳಿ ಗ್ರಾಮದ ವಾಸಿಯಾದ ಮನೋಜ್ s/o ಬಸವರಾಜು ಅವರು ತಮ್ಮ ಸ್ವಂತ ನಾಲ್ಕು ಎಕರೆ ಜಮೀನಿನಲ್ಲಿ ತೆಂಗಿನ ನಾರಿನ ಕಾರ್ಖಾನೆ ಇದ್ದು
ಇಂದು ಈ ಕಾರ್ಖಾನೆ ಬೆಂಕಿಗೆ ಆಹುತಿಯಾಗಿದೆ.

ಇದಕ್ಕೆ ಕಾರಣ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ನಡೆದು,
ತೆಂಗಿನ ನಾರು ,ತೆಂಗಿನ ಸಿಪ್ಪೆ, ನಾರಿನ ಪುಡಿ, ಒಟ್ಟಾರೆ 20 ರಿಂದ 25 ಲಕ್ಷ ರೂ ಈ ಕಾರ್ಖಾನೆ ಮಾಲೀಕರಿಗೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಈ ಬೆಂಕಿಯನ್ನು ನಂದಿಸಲು ತಾಲೂಕಿನ ಅಗ್ನಿಶಾಮಕ ದಳ ಸುಮಾರು ನಾಲ್ಕು ವಾಹನದಲ್ಲಿ ಬಂದಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
