Janataa24 NEWS DESK

ಜೆ ಪಿ ಆಂಗ್ಲ ಶಾಲೆಯ ಪ್ರಿನ್ಸಿಪಾಲ್ ತುಕಾರಾಂ ಗೆ ದಿ ಬೆಸ್ಟ್ ಪ್ರಿನ್ಸಿಪಾಲ್ ನ್ಯಾಷನಲ್ ಅವಾರ್ಡ ಮತ್ತು ಸಹ ಶಿಕ್ಷಕಿ ಮಹಾಲಕ್ಷ್ಮಿ ಅವರಿಗೆ ದಿ ಬೆಸ್ಟ್ ಟೀಚರ್ ನ್ಯಾಷನಲ್ ಅವಾರ್ಡ್.
ತುರುವೇಕೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ಜೆ ಪಿ ಆಂಗ್ಲಶಾಲೆಯ ಪ್ರಿನ್ಸಿಪಾಲ್ ಹೆಚ್ ಆರ್ ತುಕಾರಾಂ ಮತ್ತು ಸಹ ಶಿಕ್ಷಕಿ ಮಹಾಲಕ್ಷ್ಮಿ, ಎಸ್ ಎಂ, ಅವರಿಗೆ
ಬೆಂಗಳೂರಿನ ಕರ್ನಾಟಕ ಪ್ರತಿಭಾ ಅಕಾಡೆಮಿ ವತಿಯಿಂದ ಪುರಭವನದಲ್ಲಿ ಹಮ್ಮಿಕೊಂಡಿದ್ದ ,
ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಇಬ್ಬರು ಶಿಕ್ಷಕರಿಗೆ ಅವಾರ್ಡ್ ಪ್ರಶಸ್ತಿಯನ್ನು ನೀಡಲಾಗಿದೆ, ಇನ್ನು ಈ ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷರಾದ ಶಂಕರ್ ಪಾಟೀಲ್, ಕೆ ಎಸ್ ಡಿ ಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಶಾಂತ್ ಕುಮಾರ್, ಮತ್ತು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ರಮೇಶ್ ಕೋನರೆಡ್ಡಿ ,ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಪ್ರಶಸ್ತಿ ಬಂದ ಹಿನ್ನೆಲೆ ಈ ಇಬ್ಬರು ಶಿಕ್ಷಕರಿಗೆ ಶಾಲಾವತಿಯಿಂದ ಮತ್ತು ವಿದ್ಯಾರ್ಥಿಗಳಿಂದ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ ,
ಜೊತೆಗೆ ಸಾರ್ವಜನಿಕ ವಲಯದಲ್ಲಿ ಸಂತೋಷ ತಂದಿದೆ.
ವರದಿ
ತುರುವೇಕೆರೆ: ಮಂಜುನಾಥ್