Gubbi: ಎಮ್ಮೆಗೆ ಕೆರೆಯಲ್ಲಿ ನೀರು ಕುಡಿಸಲುಹೋದ ತಾಯಿ ಮಗಳು ನೀರು ಪಾಲು.

Janataa24 NEWS DESK 

 

Gubbi: ಎಮ್ಮೆಗೆ ಕೆರೆಯಲ್ಲಿ ನೀರು ಕುಡಿಸಲುಹೋದ ತಾಯಿ ಮಗಳು ನೀರು ಪಾಲು.

 

ಗುಬ್ಬಿ: ಎಮ್ಮೆಗೆ ನೀರು ಕುಡಿಸಲು ಕೆರೆಗೆ ಹೋಗಿದ್ದ ಸಂದರ್ಭದಲ್ಲಿ ಹೆಮ್ಮೆಮತ್ತು ಕರುಗಳು ನೀರಿಗೆ ಎಳೆದುಕೊಂಡು ಹೋದ ಸಂದರ್ಭದಲ್ಲಿ ಮಗಳಜೀವ ಉಳಿಸಲು ಹೋಗಿ ತಾಯಿ ಕೂಡ ನೀರು ಪಾಲಾದ ಘಟನೆ ನಡೆದಿದೆ.

 

ತಾಲೂಕಿನ ನಿಟ್ಟೂರು ಹೋಬಳಿಯ ವಿರುಪಾಕ್ಷಿಪುರ ಗ್ರಾಮದ ವಾಸಿಯಾದ ಪ್ರೇಮಕುಮಾರಿ( 50)ವರ್ಷ ಮಗಳು ಪೂರ್ಣಿಮಾ (30 ) ಮೃತ ದುರ್ದೈವಿಗಳಾಗಿದ್ದರೆ.

 

ವಿರುಪಾಕ್ಷಿಪುರ ಗ್ರಾಮದಲ್ಲಿ ವಾಸವಾಗಿದ್ದ ತಾಯಿ ಮಗಳು ವೃತ್ತಿಯಲ್ಲಿ ಕೃಷಿಕರಾಗಿ ಜೀವನ ನಡೆಸುತ್ತಿದ್ದರು ಮಗಳು ಪೂರ್ಣಿಮಾ ಬುದ್ಧಿಮಾಂದ್ಯ ಯುವತಿಯಾಗಿದ್ದು ಈಕೆಯು ದಿನನಿತ್ಯ ತಾಯಿಯ ಜೊತೆ ತೋಟಕ್ಕೆ ತೆರಳುತ್ತಿದ್ದಳು.

ಗುರುವಾರ ಎಂದಿನಂತೆ ಎಮ್ಮೆ ಮೇಯಿಸಲು ತಮ್ಮ ತೋಟಕ್ಕೆ ತೆರಳಿದಾಗ ಸಮೀಪದಲ್ಲಿ ಇರುವ ಅದಲಗೆರೆ ಕೆರೆಗೆ ಎಮ್ಮೆಗೆ ನೀರು ಕುಡಿಸಲು ಹೋದ ಸಂದರ್ಭದಲ್ಲಿ ಎಮ್ಮೆ ಮತ್ತು ಕರುಗಳು ನೀರು ಆಳವಾದ ಹೊಂಡದಲ್ಲಿ ಎಮ್ಮೆ ಮತ್ತು ಕರುಗಳು ನೀರಿಗೆ ಇಳಿದ ಕಾರಣ ಅವುಗಳನ್ನು ರಕ್ಷಿಸಲು ಹೋದ ಸಂದರ್ಭದಲ್ಲಿ ತಾಯಿ ಮತ್ತು ಮಗಳು ನಿರುಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.

 

ಶುಕ್ರವಾರ ಬೆಳಗ್ಗೆ ತಮ್ಮ ತೋಟಕ್ಕೆ ತೆರಳಿದ ಗ್ರಾಮಸ್ಥರು ಕೆರೆಯಲ್ಲಿ ಮೃತದೇಹಗಳು ನೀರಿನಲ್ಲಿ ತೇರುತ್ತಿರುವ ದೃಶ್ಯ ಕಂಡು ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದಾಗಿ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಪಾರ ಜಿಲ್ಲಾ ವರಿಷ್ಠಾಧಿಕಾರಿ ಅಬ್ದುಲ್ ಖಾದರ್ ಭೇಟಿ ನೀಡಿದ್ದು.

ಈ ಪ್ರಕರಣವು ಚೇಳೊರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವರದಿ:ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Leave a Reply

Your email address will not be published. Required fields are marked *