Pavagada: ಶಾಲೆಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು.

Janataa24 NEWS DESK 

 

Pavagada: ಶಾಲೆಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು.

 

ಪ್ರತಿ ಶಾಲೆಗಳಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು: ಸ್ಥಳೀಯ ಶಾಸಕ ಹಾಗೂ ಜಿಲ್ಲಾ ಸುಮೂಲ್ ಅಧ್ಯಕ್ಷರಾದ ಹೆಚ್.ವಿ ವೆಂಕಟೇಶ್ ತಿಳಿಸಿದರು.*

 

ಪಾವಗಡ ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ನಂತರ ಪತ ಸಂಚಲನ ನೆರವೇರಿಸಿ ಮಾತನಾಡಿದವರು ಸಂವಿಧಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸಂವಿಧಾನ ಬದಲಾವಣೆ ಮಾಡಲು ಕುತಂತ್ರಗಳು ನಡೆಯುತ್ತಿವೆ.

 

ಎಸ್ಸಿ ಎಸ್ಟಿ ಸಮುದಾಯಕ್ಕೆ ರಿಸರ್ವೇಶನ್ ಇಲ್ಲದಿದ್ದರೆ ಉತ್ತಮ ವಿದ್ಯಾಭ್ಯಾಸ ಮಾಡಲು ಸಹ ಆಗುತ್ತಿರಲಿಲ್ಲ.

 

ದಿನೇ ದಿನೇ ದೇಶ ಬೆಳೆಯುತ್ತಿದೆ ನಮ್ಮ ದೇಶದ ಮಕ್ಕಳು ವಿದ್ಯಾಭ್ಯಾಸ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಬೆಳೆಯುತ್ತಿದ್ದಾರೆ ವಿದ್ಯಾಭ್ಯಾಸ ಇಲ್ಲದಿದ್ದರೆ ಇಂದು ಯಾವುದೇ ತರದ ಅಭಿವೃದ್ಧಿ ಸಾಧ್ಯವಿಲ್ಲ.

 

ಮಕ್ಕಳಿಗೆ ಪೋಷಕರು ವಿದ್ಯಾಭ್ಯಾಸ ನೀಡಲು ಹೆಚ್ಚು ಹೊತ್ತು ನೀಡಬೇಕು.

 

ನಮ್ಮ ದೇಶ ವೇಗವಾಗಿ ಬೆಳೆಯುತ್ತಿದೆ ಅಭಿವೃದ್ಧಿ ದತ್ತ.

 

ಸರ್ಕಾರ ಜನರಿಗೆ ಉತ್ತಮ ಯೋಜನೆ ನೀಡಿ ಉತ್ತಮ ಕೆಲಸಗಳು ಮಾಡುತ್ತಿವೆ. ನಾನು ಸಹ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಪವಾಡ ಅಭಿವೃದ್ಧಿ ಕಡೆ ಹೆಚ್ಚು ಹೊತ್ತು ನೀಡುತ್ತಿದ್ದೇನೆ ಎಂಬುದಾಗಿ ಈ ವೇಳೆ ತಿಳಿಸಿದರು.

 

ತಾಲೂಕಿನಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಮುಂದಿನ ತಿಂಗಳು ಮಾನ್ಯ ಮುಖ್ಯಮಂತ್ರಿಗಳ ಕರೆಸಿ ಬಹಳಷ್ಟು ಅಭಿವೃದ್ಧಿಯೋಜಿಗಳು ಉದ್ಘಾಟನೆ ಮಾಡಲು ಮುಂದಾಗಿದ್ದೇನೆ ಬೈಪಾಸ್ ವ್ಯವಸ್ಥೆ ಹಾಗೂ ಮುಂದಿನ ದಿನಗಳಲ್ಲಿ ನಾಗಲಮಡಿಕೆ ಸುಬ್ರಹ್ಮಣ್ಯ ದೇವಸ್ಥಾನ ಹೆಚ್ಚು ಹೊತ್ತು ನೀಡುತ್ತಿದ್ದು ಸುಮಾರು ೧೨ ಕೋಟಿ ವೆಚ್ಚದಲ್ಲಿ ದೇವಸ್ಥಾನ ಅಭಿವೃದ್ಧಿ ಕಾರ್ಯಕ್ಕೆ ಈಗಾಗಲೇ ಸರ್ವೆ ಕಾರ್ಯ ಹಾಗೂ ಹಣ ಬಿಡುಗಡೆಗೆ ಎಲ್ಲಾ ತರದ ವ್ಯವಸ್ಥೆ ಮಾಡಲಾಗಿದೆ.

 

ಈ ಭಾಗದ ಬಡವರಿಗಾಗಿ 5 ಎಕರೆ ಕಾಲಿ ನಿವೇಶನ ಪಡೆದು ಮನೆ ನಿರ್ಮಾಣಕ್ಕಾಗಿ ವ್ಯವಸ್ಥೆ ಕಲ್ಪಿಸಿದ್ದೆವೆ ಇನ್ನೂ ಐದು ಎಕರೆ ಹೆಚ್ಚು ಜಾಗ ಗುರುತಿಸಿ ಅಲ್ಲಿಯೂ ಸಹ ಮನೆಗಳನ್ನು ಕಲ್ಪಿಸಲು ಮುಂದಾಗಿದ್ದೇನೆ ಆದರೆ ಹೆಚ್ಚು ಜನರಿಗೆ ನಿವೇಶನ ವ್ಯವಸ್ಥೆ ಮಾಡಬೇಕು ಎಂಬುದಾಗಿ 10 ಎಕರೆ ಜಮೀನನ್ನು ಇರುವ ಜಾಗವನ್ನು ವ್ಯವಸ್ಥೆ ಮಾಡಲು ತಾಸಿಲ್ದಾರ್ ರವರಿಗೆ ಸೂಚನೆ ನೀಡಿದ್ದೇನೆ ಎಂದರು.

 

ಈಗಾಗಲೇ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಎಲ್ಲಾ ತರದ ಸಿದ್ಧಾಂತಗಳು ನಡೆಯುತ್ತಿವೆ ಎಂದರು.

 

 

ಇವಳೇ ವಿವಿಧ ಶಾಲೆ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿ ಕೊಟ್ಟರು.

 

ತಾಲೂಕು ಆಡಳಿತ ದಿಂದ ಕೆಲವರಿಗೆ ನಿವೇಶನದ ಹಕ್ಕು ಪತ್ರಗಳು ನೀಡಿದರು.

 

ಕಾರ್ಯಕ್ರಮದಲ್ಲಿ ತಹಸಿಲ್ದಾರ್ ವರದರಾಜು ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಂದ್ರಣಮ್ಮ. ರೈತ ಸಂಘದ ಮುಖಂಡರು ಹಾಗೂ ಜನಪ್ರತಿಗಳು ಭಾಗವಹಿಸಿದ್ದರು.

 

ವರದಿ: ಇಮ್ರಾನ್ ಉಲ್ಲಾ. ಪಾವಗಡ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Leave a Reply

Your email address will not be published. Required fields are marked *