Janataa24 NEWS DESK
Chikkodi: ಕತ್ತಿಗೆ ಕೈ ತಪ್ಪಿದ ಟಿಕೆಟ್, ಕಾರ್ಯಕರ್ತರಿಗೆ ನೋವಾಗಿದೆ– ಉಮೇಶ್ ಕತ್ತಿ

ಚಿಕ್ಕೋಡಿ: ಲೋಕಸಭಾ ಟಿಕೆಟ್ ವಂಚಿತ ರಮೇಶ್ ಕತ್ತಿ ಹೇಳಿಕೆ: ನಾನು ಚಿಕ್ಕೋಡಿ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದೆ ನನ್ನ ಪರವಾಗಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇಬ್ಬರು ಕೂಡ ನನ್ನ ಪರವಾಗಿ ಪ್ರಯತ್ನ ಮಾಡಿದರು ಆದರೂ ನನಗೆ ಟಿಕೆಟ್ ತಪ್ಪಿದೆ, ನಾನು ಟಿಕೆಟ್ ನಿಂದ ವಂಚಿತನಾಗಿದ್ದೇನೆ.
ಪಕ್ಷದ ವರಿಷ್ಠರು ತೆಗೆದುಕೊಂಡ ನಿರ್ಣಯಕ್ಕೆ ನಾನು ಬದ್ಧನಾಗಿದ್ದೇನೆ ಅಣ್ಣಾಸಾಬ್ ಜೋಲ್ಲೆಗೆ ಟಿಕೆಟ್ ಸಿಕ್ಕಿದೆ.
ಅದನ್ನು ನಾನು ಸ್ವಾಗತ ಬಯಸುತ್ತೇನೆ ಪಕ್ಷದ ಪರವಾಗಿ ನಾನು ಕೆಲಸವನ್ನೂ ಮಾಡುತ್ತೇನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬರಿಗೆ ಟಿಕೆಟ್ ನೀಡುತ್ತಾರೆ.ಅದನ್ನ ನಾವು ಎಲ್ಲಾ ಬಲಪಡಿಸಬೇಕು ಯಾರಿಗೆ ಟಿಕೆಟ್ ಕೊಟ್ಟಿದ್ದಾರೆ ಅವರನ್ನಾ ನಾವು ಈಗ ಬೆಂಬಲಿಸಬೇಕಾದ ಅನಿವಾರ್ಯ ಎದುರಾಗಿದೆ.
ಕ್ಷೇತ್ರದಲ್ಲಿ ಪ್ರತಿಯೊಂದು ಕುಟುಂಬದ ಜೊತೆ ನಾನು ಸಹೋದರ ಸದಸ್ಯನಾಗಿದ್ದೇನೆ ಈ ಬಾರಿ ರಮೇಶ್ ಕತ್ತಿಗೆ ಟಿಕೆಟ್ ಸಿಗುತ್ತೆ ಅಂತ ಕ್ಷೇತ್ರ ಜನರ ನಂಬಿಕೆ ಇತ್ತು ಟಿಕೆಟ್ ಸಿಗದೇ ಇರುವುದರಿಂದ ಅವರಿಗೆ ನೋವಾಗಿದೆ ಕ್ಷೇತ್ರದ ಜನರು ಏನಾದರೂ ಮಾಡಿ ಎಂದು ನನಗೆ ಒತ್ತಾಯ ಮಾಡುತ್ತಿದ್ದಾರೆ.
ಪ್ರಮುಖವಾಗಿ ಕಾರ್ಯಕರ್ತರೇ ನಮ್ಮ ಆಸ್ತಿ ದಶಕಗಳಿಂದ ಕಾರ್ಯಕರ್ತರ ಜೊತೆ ನಾನು ಒಡನಾಟ ಇಟ್ಟಿದ್ದೇನೆ ಹಿಂದೆ ರಾಜ್ಯಸಭಾ ವಿಧಾನಸಭಾ ಸದಸ್ಯ ಸ್ಥಾನ ಕೊಡುತ್ತೇನೆ ಎಂದು ಬಿಜೆಪಿ ನಾಯಕರು ಭರವಸೆ ನೀಡಿದರು ಆದರೆ ಈ ಬಾರಿ ಟಿಕೆಟ್ ಕೊಡ್ತೀನಿ ಎಂದು ಕೂಡ ತಿಳಿಸಿದರು
ಟಿಕೆಟ್ ತಪ್ಪಿದ್ದರಿಂದ ನಾವು ಅತಂತ್ರರಾಗಿದ್ದೇವೆ ಎಂದು ಬೆಂಬಲಿಗರು ಭಾವನೆ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ನಾನು ಇದುವರೆಗೆ ಯಾವುದೇ ತೀರ್ಮಾನ ಮಾಡಿಲ್ಲ.
ದೇಶಕ್ಕೆ ಮೋದಿ (Modi) ಅನಿವಾರ್ಯತೆ ಇದೆ ಹುಣ್ಣಿಮೆಯಾದ ನಂತರ ಸಭೆ ನಡೆಸಲಾಗುವುದು ಆ ಸಭೆಯಲ್ಲಿ ಬೆಂಬಲಿಗರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ನೋಡೋಣ. ಚಿಕ್ಕೋಡಿಯಲ್ಲಿ ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಎಚ್ಚರಿಕೆ ರವಾನಿಸಿದ ರಮೇಶ್ ಕತ್ತಿ.
ವರದಿ -ಡಾ! ರವಿ ಬಿ ಕಾಂಬಳೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Chikkanayakanahalli : ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶಿಲ್ದಾರ್.