Janataa24 NEWS DESK
Central Govt :ಕೇಂದ್ರ ಸರ್ಕಾರ ಬರ ಪರಿಹಾರ ವಿಳಂಬಕ್ಕೆ ಕಾರಣನಲ್ಲ – ಕೇಂದ್ರ ವಿತ್ತ ಸಚಿವೆ.

ಬೆಂಗಳೂರು : ಕರ್ನಾಟಕದಲ್ಲಿ ಈ ಬಾರಿ ಮಳೆ ಬೆಳೆಯಾಗದೇ ಬರಗಾಲ ಆವರಿಸಿದೆ ರಾಜ್ಯ ಸರ್ಕಾರ ಬರಗಾಲ ಎದುರಿಸಲು ಹಲವಾರು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ ಆದರೇ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ (Nirmala Seetharaman)ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಆಗಾದರೇ ಬರಪರಿಹಾರ ಬಿಡುಗಡೆ ವಿಳಂಬಕ್ಕೆ ಕಾರಣವೇನು ..?
ರಾಜ್ಯ ಸರ್ಕಾರ ನರೇಂದ್ರ ಮೋದಿ ನೇತೃತ್ವದ ಬಳಿ ಬರಪರಿಹಾರಕ್ಕಾಗಿ ಹಲವಾರು ಮನವಿ ಮಾಡಿದೆ ಆದರೇ ನಸಪೈಸೆ ಹಣ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು.
ಆದರೇ ಇಂದು ಕೇಂದ್ರ ವಿತ್ತ ಸಚಿವೆ ಕರ್ನಾಟಕ ಬರ ಪರಿಹಾರ ಅನುದಾನ ಬಿಡುಗಡೆಗೆ ಕೇಂದ್ರ ಕಾರಣವಲ್ಲ ಉನ್ನತಾಧಿಕಾರ ಸಮಿತಿ ಸಭೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅನುಮತಿ ಬಾರದಿರುವುದು ಕಾರಣ ಎಂಬುವುದು ಸ್ವಷ್ಟ ಪಡಿಸಿದ್ದಾರೆ.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಅಂತರ ಸಚಿವಾಲಯ ತಂಡ ರಾಜ್ಯ ಬರ ಪರಿಸ್ಥಿತಿ ಕುರಿತು ಕೃಷಿ ಸಚಿವಾಲಯಕ್ಕೆ ಕಳಿಸಿದ್ದಾರೆ. ಅದನ್ನಾ ಪರಿಶೀಲನೆ ನಡೆಸಿದ್ದೇವು ಆದರೇ ಅಷ್ಟರಲ್ಲಿ ಚುನಾವಣೆ ಘೋಷಣೆಯಾಯಿತು. ಆಗಾಗಿ ಉನ್ನತಾಧಿಕಾರ ಸಮಿತಿ ನಡೆಸಲು ಸಾಧ್ಯವಾಗಿಲ್ಲ ಎಂದರು.
ರಾಜ್ಯಕ್ಕೆ ವಿಪತ್ತು ಪರಿಹಾರ ನಿಧಿಗೆ ಕೇಂದ್ರವು ವಂತಿಗೆ ನೀಡುತ್ತದೆ. ಕರ್ನಾಟಕಕ್ಕೆ ಎರಡೂ ಕಂತುಗಳ 629 ಕೋಟಿ ಮಾಡಲಾಗಿದೆ ಎಂದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube