JANATAA24 NEWS DESK
Tumakuru: ಯಾವ್ದಣ್ಣ ಲೇಪಾಕ್ಷಿ(SRS – ತುಮಕೂರು ಬಡ್ಡಿಹಳ್ಳಿ) ಅಣ್ಣ ಹೊಸ ಪ್ಲ್ಯಾನು…?

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫೋನ್ ನಂಬರ್ ಮತ್ತು ಮನೆ ವಿಳಾಸದ ಮಾಹಿತಿಯನ್ನು ಖಾಸಗಿ ಕಾಲೇಜು ನಡೆಸುತ್ತಿರುವ ಸಂಸ್ಥೆಗಳಿಗೆ ಮಾರಾಟ ಮಾಡಿದ್ರಾ ಶಿಕ್ಷಣ ಇಲಾಖೆ ಅಧಿಕಾರಿಗಳು.!
SSLC ಫಲಿತಾಂಶ ಇನ್ನೂ ಬಂದಿಲ್ಲ, ಆದರೂ ಮಂಗಳವಾರ ಕೊನೆ ದಿನ ಈ offer ಸಿಗಲ್ಲ, ನಿಮ್ಮ ಮಕ್ಕಳಿಗೆ Aviation ಸ್ಕಿಲ್ಸ್, ಕೃಷಿ ಬಗ್ಗೆ, ತೋಟಗಾರಿಕೆ ಸ್ಕಿಲ್ಸ್ ಕಲಿಸ್ತೀವಿ ನಮ್ಮ ಕಾಲೇಜಿನೊಂದಿಗೆ MNC ಕಂಪನಿಯವರು ವಿಲೀನಗೊಂಡಿದ್ದಾರೆ, 45 ಸಾವಿರ scholorship ಕೊಡ್ತೀವಿ ಅಂತ ಬಡ, ಕೂಲಿ ಕಾರ್ಮಿಕರ, ರೈತರ ಮಕ್ಕಳ ಪೋಷಕರಿಗೆ SRS ಕಾಲೇಜಿನಿಂದ ಕರೆ ಮಾಡಿ, offer ಇದೆ, ಮಂಗಳವಾರ ಕೊನೆ ದಿನಾಂಕ ಆದಷ್ಟೂ ಬೇಗ ಬಂದು ನಿಮ್ಮ ಮಕ್ಕಳನ್ನೂ ಸೇರಿಸಿ ಎಂದು ಪೋಷಕರಿಗೆ ಕರೆ ಮಾಡುತ್ತಿದ್ದಾರೆ.
ಆದರೆ, ಯಕ್ಷ ಪ್ರಶ್ನೆ ಎಂದರೆ,
ಬಡ ಮಕ್ಕಳು 45ಸಾವಿರ ಎಲ್ಲಿಂದ ಕಟ್ಟುತ್ತಾರೆ.?
SSLCಯಲ್ಲಿ 98% percentage ಬಂದರೆ scholorship ಮುಖಾಂತರ ನಿಮಗೆ ಪ್ರವೇಶ ಶುಲ್ಕ ಹಿಂತಿರುಗುಸುತ್ತೇವೆ ಎಂದು ಹೇಳ್ತಿದ್ದೀರ. ಹಾಗಾದ್ರೆ 98% ಬಂದವರಿಗೆ ವಿದ್ಯಾಭ್ಯಾಸ ನೀಡುವುದಾದರೆ, ಮಧ್ಯಮ ವರ್ಗದ ವಿದ್ಯಾರ್ಥಿಗಳುಗೆ ನಿಮ್ಮ ಸಂಸ್ಥೆಯಿಂದ ಎಷ್ಟರ ಮಟ್ಟಿಗೆ ಶಿಕ್ಷಣ ನೀಡುತ್ತಿರಬಹುದು….?
ನಿಮ್ಮ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು, 98% ಕೆಳಗಡೆ ಬಂದವರಿಗೆ ಮತ್ತು Fail ಆದವರಿಗೆ Scholorship ಹೇಗೆ ಕೊಡ್ತೀರ, 45 ಸಾವಿರ ಹೇಗೆ ಪೊಷಕರಿಗೆ ಹಿಂದುರಿಗಿಸುತ್ತೀರ…..?
ಎಷ್ಟು ಹಳ್ಳಿಯಿಂದ ಬಂದ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಎಲ್ಲಿ ಮಾಡ್ತೀರ…..?
ಅಣ್ಣ ಲೇಪಾಕ್ಷಣ್ಣ ನಿಮಗೆ
SSLC ವಿದ್ಯಾರ್ಥಿಗಳ ಪೋಷಕರ ದೂರವಾಣಿ ನಂ ಎಲ್ಲಿಂದ ಯಾರಿಂದ ಸಿಕ್ತು…?
ನಿಮ್ಮ ಟ್ರಸ್ಟ್ ನಲ್ಲಿ ಎಷ್ಟು ಬಡ ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ…..?
ಇದೆಲ್ಲಾ ಒಂದು ಖಾಸಗೀ ಶಾಲಾ ಕಾಲೇಜಿನ ಅಧ್ಯಕ್ಷರ ಕಾಲೇಜಿನಲ್ಲಿ ನಡೆಯುತ್ತಿದೆ.
ದಯಮಾಡಿ ಈ ಬಗ್ಗೆ ತುಮಕೂರು ಪದವಿ ಪೂರ್ವ ಶಿಕ್ಷಣ ಮಂಡಳಿ ಏನು ಮಾಡುತ್ತಿದೆ..?
ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಆದಷ್ಟು ಬೇಗ ಬಡ, ರೈತರ, ಕೂಲಿ ಕಾರ್ಮಿಕರ ಪೋಷಕರಿಗೆ, ವಿದ್ಯಾರ್ಥಿಗಳಿಗೆ ಈ ಬಗ್ಗೆ ಸ್ಪಷ್ಟತೆ ನೀಡಬೇಕಾಗಿ ವಿನಂತಿಸಿದ
ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ದರ್ಶನ್.ಎಂ.ಎಸ್.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.