Janataa24 NEWS DESK
TTD: ತಿರುಪತಿ ತಿಮ್ಮಪ್ಪನಿಗೆ ನಂದಾದೀಪ ನೀಡಿದ ಮೈಸೂರು ರಾಜಮಾತೆ.

ತಿರುಪತಿ ತಿಮ್ಮಪ್ಪನಿಗೂ ಮೈಸೂರು ಯದುವಂಶದ ಮಹಾರಾಜರಿಗೂ ಬಹಳ ವರ್ಷಗಳ ಹಿಂದಿನಿಂದಲೂ ನಂಟಿದೆ. 300 ವರ್ಷಗಳ ಹಿಂದೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಿರುಪತಿ ತಿಮ್ಮಪ್ಪನಿಗೆ ನಂದಾದೀಪವನ್ನ ಉಡುಗೊರೆಯಾಗಿ ನೀಡಿದ್ದರು.
300 ವರ್ಷಗಳ ಹಿಂದೆ ನೀಡಿದ್ದ ನಂದಾದೀಪವೇ ಈಗಲೂ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿದೆ. ಹಳೆಯ ನಂದಾದೀಪ ಈಗ ದುರಸ್ಥಿಗೊಂಡಿತ್ತು. ನಂದಾದೀಪದ ದುಸ್ಥಿತಿಯ ಬಗ್ಗೆ ಮೈಸೂರು ರಾಜಮಾತೆ ಪ್ರಮೋದಾದೇವಿ ಒಡೆಯರ್ಗೆ TTD ಮಾಹಿತಿ ನೀಡಿತ್ತು.
ಈ ವಿಷಯ ತಿಳಿದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ತಿರುಪತಿಗೆ ಹೊಸ ದೀಪಗಳನ್ನು ರವಾನೆ ಮಾಡಿದ್ದಾರೆ. ಮೈಸೂರು ರಾಜವಂಶಸ್ಥರು ಬರೋಬ್ಬರಿ 100 ಕೆಜಿ ತೂಕದ ಬೆಳ್ಳಿ ನಂದಾದೀಪವನ್ನ ಉಡುಗೊರೆಯಾಗಿ ನೀಡಿದ್ದಾರೆ. ಈ 100 KG ಬೆಳ್ಳಿಯ ನಂದಾದೀಪ ತಯಾರಿಸಲು 2 ತಿಂಗಳು ಬೇಕಾಗಿದೆ. 100 ಕೆಜಿ ಬೆಳ್ಳಿಯ ಬೆಲೆ ಸದ್ಯಕ್ಕೆ 1 ಕೋಟಿ ರೂಪಾಯಿ ಇದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.