Gundlupete: ಕನಕ ಯುವಕ ಸಂಘದ ವತಿಯಿಂದ ಕನಕದಾಸರ ಜಯಂತಿ ಆಚರಣೆ.
ಗುಂಡ್ಲುಪೇಟೆ: ಕಾಂತರಾಜು
ಗುಂಡ್ಲುಪೇಟೆ ಶ್ಯಾನಾಡ್ರಹಳ್ಳಿ ಗ್ರಾಮದ ಕನಕ ಯುವಕ ಸಂಘದ ವತಿಯಿಂದ ಕನಕದಾಸರ ಜಯಂತಿ ಆಚರಣೆ ಮಾಡಲಾಯಿತು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವೇಗೌಡ ಮಾತನಾಡಿ ಕನಕದಾಸರು ಒಂದು ವರ್ಗದ ಜನರಿಗೆ ಸೀಮಿತವಲ್ಲ ಎಲ್ಲಾ ವರ್ಗದ ಜನರಿಗೆ ಸಮಾನವಾದ ಅವಕಾಶಗಳನ್ನು ಕೊಡಲು ಶ್ರಮಿಸಿದ್ದಾರೆ ಹಾಗೂ ಇವರು ಜಾತೀಯತೆ, ಬಡತನ, ಅಸ್ಪೃಶ್ಯತೆ… ಹೀಗೆ ಹಲವಾರು ಅನಿಷ್ಟ ಪದ್ಧತಿಗಳನ್ನು ತೊಲಗಿಸಲು ಹೋರಾಟಗಳನ್ನು ಮಾಡಿದ್ದಾರೆ ಇವರ ಕೀರ್ತನೆಗಳು ಭಕ್ತಿಯ ಭಾವವನ್ನು ಸಾರಿ ಹೇಳಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುರುಬ ಸಮುದಾಯದ ಮುಖಂಡರಾದ ದೊಡ್ಡಬಸವೆಗೌಡ ಪುಟ್ಟಬಸವೆಗೌಡ , ರವೀಶ್, ಎಸ್.ಬಿ. ಬಸವರಾಜು, ಉಮೇಶ್ ,ರಾಜೇಂದ್ರ (ಧರ್ಮ), ಮಹೇಶ್ ಪಿ.ಪುಟ್ಟರಾಜು, ಲೋಕೇಶ್, ಮುದ್ದುಮಾದೇಗೌಡ, ಮತ್ತಿತರರು ಉಪಸ್ಥಿತರಿದ್ದರು
