Janataa24 NEWS DESK

ಪಾವಗಡ: ವಿಷ ಆಹಾರ ಸೇವಿಸಿ 42 ಕುರಿಗಳು ಸಾವನಪ್ಪಿವೆ.
ಪಾವಗಡ ತಾಲೂಕಿನ ಗಡಿ ಗ್ರಾಮವಾದ ಬಿ.ಕೆ.ಹಳ್ಳಿ ಬಳಿ ಇರುವ ವಡ್ರೇವು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕುರಿಗಾಹಿ ರೈತರ 60 ಕುರಿಗಳಲಿ 42 ಮೇಕೆಗಳು ಇದ್ದಕ್ಕಿದ್ದಂಗೆ ಸಾವನ್ನಪ್ಪಿವೆ.

ಶುಕ್ರವಾರ ಬೆಳಗ್ಗೆ 11 ಗಂಟೆಗೆ ಗ್ರಾಮದ ಹೊರವಲಯದಲ್ಲಿ ಕುರಿ ಮೇಕೆಗಳು ಎಂದಿನಂತೆ ಮೇವಿಗಾಗಿ ಹೋಗಿದ್ದು ಪರಂಗಿ ಗಿಡಗಳ ತೋಟದ ಬಳಿ ಪಕ್ಕದ ಹುಲ್ಲು ತಿಂದ ಹಿನ್ನೆಲೆಯಲ್ಲಿ.
ಈ ದುರ್ಘಟನೆ ಸಂಭವಿಸಿದೆ ಇದೇ ಗ್ರಾಮದ ಗೊಲ್ಲರ ಜನಾಂಗದ ಅಂಜಪ್ಪ ಗೋಪಾಲಪ್ಪ ಮತ್ತು ರವಿ ಎಂಬ ಮೂರು ಕುಟುಂಬಕ್ಕೆ ಸೇರಿದ ಈ ಕುರಿ ಮೇಕೆಗಳು.

ಸಾವಿಗೀಡಾಗಿವೆ ಪ್ರತಿಯೊಂದು ಕುರಿಯ ಬೆಲೆ ಸುಮಾರು 12,000ಕ್ಕೂ ಮೇಲ್ಪಟ್ಟು ಎಂದು ರೈತರು ಹೇಳಿದ್ದಾರೆ.
ಸ್ಥಳಕ್ಕೆ ಪಶು ಸಂಗೋಪನೆ ಇಲಾಖೆಯ ವೈದ್ಯರು ಧಾವಿಸಿದ್ದು ಶಿವ ಪರೀಕ್ಷೆ ನಡೆಸಿದ್ದಾರೆ ಕುರಿ ಮೇಯಿಸಿ ಜೀವನ ನಡೆಸುತಿದ್ದರು.
ಅದೇ ಆಧಾರವಾಗಿಟ್ಟುಕೊಂಡ ರೈತರು ಕುರಿಗಳ ಸಾವಿನಿಂದ ಕಂಗಾಲಾಗಿದ್ದಾರೆ.

ಆರು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ ಈ ರೈತರ ನೆರುವಿಗೆ ಸರ್ಕಾರ ದಾವಿಸಬೇಕಾಗಿದೆ ಎಂದು ಇಲ್ಲಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ತಾಲೂಕ ಆಡಳಿತ ಸಿಬ್ಬಂದಿ ಪೊಲೀಸ್ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ:- ಇಮ್ರಾನ್ ಉಲ್ಲಾ ಪಾವಗಡ.
