Janataa24 NEWS DESK
Turuvekere: ಭೀಮ್ ಬಡಾವಣೆಯಲ್ಲಿ 133ನೇ ಅಂಬೇಡ್ಕರ್ ಜಯಂತಿ, ಪುಟಾಣಿ ಮಕ್ಕಳ ಖುಷಿಯೋ ಖುಷಿ.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಟಿ ಬಿ ಕ್ರಾಸ್ ಗ್ರಾಮದ ಜೈ ಭೀಮ್ ಬಡಾವಣೆಯಲ್ಲಿ ಇಂದು ಸಂಜೆ ಪುಟ್ಟ ಮಕ್ಕಳ ಸಮ್ಮುಖದಲ್ಲಿ ಭಕ್ತಿಯಿಂದ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾವಚಿತ್ರದ ಮುಂಭಾಗ ಕ್ಯಾಂಡಲ್ ಗಳನ್ನ ಅಂಟಿಸಿ ಈ ಅಂಬೇಡ್ಕರ್ ಜಯಂತಿ(Ambedkar Jayanthi) ಆಚರಿಸಲಾಯಿತು.
ಸದಾ ಪ್ರಪಂಚದ ಪ್ರತಿಯೊಬ್ಬರ ಬಾಳಲ್ಲಿ ಇಡಿ ದೇಶದಲ್ಲಿ ಈ ಬೆಳಕು ಎಂದೆಂದೂ ವಿಜೃಂಭಿಸಲಿ ಎಂಬ ಸಂಕೇತದಿಂದ ಕ್ಯಾಂಡಲ್ ಹಿಡಿದು ಜಯಂತಿಯನ್ನು ಆಚರಿಸಲಾಯಿತು.ಇದೇ ವೇಳೆ ಜೈ ಭೀಮ್ ಬಡಾವಣೆಯ ಗುಡಿಗೌಡರುಗಳಾದ ಬೈರಪ್ಪಾಜಿ ,ಸಣ್ಣನರಸಯ , ಇವರುಗಳ ನೇತೃತ್ವದಲ್ಲಿ ಜೊತೆಗೆ ಪುಟಾಣಿ ಮಕ್ಕಳು ಎಲ್ಲಾ ಮಹಿಳೆಯರು ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಜೈ ಭೀಮ್ ಘೋಷಣೆ ಕೂಗುತ್ತಾ, ಅಂಬೇಡ್ಕರ್ ಜಯಂತಿ(Ambedkar Jayanthi)ಯನ್ನು ಬಹಳ ಸರಳವಾಗಿ ಆಚರಿಸಿದರು.
ವರದಿ ಮಂಜುನಾಥ್ ತುರುವೇಕೆರೆ
https://www.janataa24.com/on-15th-gubbi-lokayukta-officials-held-a-public-meeting
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en