Janataa24 NEWS DESK
ಪಾವಗಡ ಬ್ರೇಕಿಂಗ್
ಮೇ ಒಂದಕ್ಕೆ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಾಯ್ಯ ನವರು ಪಾವಗಡ ಬಹಿರಂಗ ಪ್ರಚಾರಕ್ಕೆ ಬರಲಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಹೆಚ್. ವಿ.ವೆಂಕಟೇಶ್, ನಂತರ ಮಾತನಾಡಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಉತ್ತಮವಾಗಿದೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಂದು ಗ್ರಾಮಕ್ಕೋ ಬೇಟಿ ನೀಡುತ್ತಿದ್ದೆನೆ.
ರಂಜಾನ್ ಹಬ್ಬದಿಂದ ಪ್ರತಿ ಗ್ರಾಮದ ಮುಸ್ಲಿಂ ಸಮುದಾಯದ ಮಸೀದಿಗಳಿಗೆ ಬೇಟಿ ನೀಡಿದ್ದೆನೆ ಉತ್ತಮ ಸ್ಪಂದನೆ ಸಿಗುತ್ತಿದೆ.

ಅದೇ ರೀತಿಯಲ್ಲಿ ನಮ್ಮ ತಂದೆಯವರಿಗೆ ಸಹ ಇದೇ ರೀತಿಯಲ್ಲಿ ಸ್ಪಂದಿಸುವ ಮೂಲಕ ನಾಲ್ಕು ಬಾರಿ ಗೆಲ್ಲಿಸಿದ್ದರು.
ಈ ಭಾರಿ ನನ್ನಗೆ ಒಂದು ಸಾರಿ ಕೈ ಹಿಡಿದರೆ ಮುಂದಿನ ದಿನಗಳಲ್ಲಿ ನಿಮ್ಮ ಸೇವೆ ಮಾಡಲು ಅನು ಮಾಡಿಕೊಡಬೇಕಾಗಿ ಮತದಾರರಿಗೆ ಮನವಿ ಮಾಡಿಕೊಂಡರು.
ನೆನ್ನೆ ನಡೆದ ಯಾದವ್ ಸಮಾವೇಶದಲ್ಲಿ ಸಮುದಾಯದವರು ಸಹ ಉತ್ತಮವಾದ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.

ಬ್ಯಾಡನೊರ್ ಗ್ರಾಮದಲ್ಲಿ ಅಂಬೇಡ್ಕರ್ ವಿಗ್ರಹಕ್ಕೆ ಪೂಜೆ ಸಲ್ಲಿಸಿ ನಂತರ ದಲಿತ ಕಾಲೋನಿಗಳಲ್ಲಿ ಮನೆ ಮನೆಗೊ ಪ್ರಚಾರ ಕೈಗೊಂಡಿದರು.ನಂತರ ಮಾತನಾಡಿ ಗ್ರಾಮಗಳಲ್ಲಿ ನಮ್ಮ ಪಕ್ಷದವರೆ ಎರಡು ಮೂರು ಗುಂಪು ಗಳಾಗಿ ಮಾಡಿಕೊಂಡಿದ್ದಾರೆ.ಆ ರೀತಿಯಲ್ಲಿ ಮಾಡಿಕೊಳ್ಳದೆ ಒಂದಾಗಿ ಕೆಲಸ ಮಾಡಿದರೆ ಉತ್ತಮವಾಗಿರುತ್ತದೆ ಎಂದರು.
ಕನ್ನಮೇಡಿ ಗ್ರಾಮದಲ್ಲಿ ಪ್ರಚಾರಕ್ಕೆ ಬಂದಂತಹ ಬೋವಿ ಸಮುದಾಯದ ಗುರುಪೀಠಧ್ಯಕ್ಷರಾದ ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಮತದಾರಲ್ಲಿ ಮತಯಾಚನೆ ಮಾಡಿದರು.

ನಂತರ ಬ್ಯಾಡನೊರ್, ಗೊಲ್ಲರ ಹಟ್ಟಿ, ಕಿಲ್ಲಾರ್ಲಹಳ್ಳಿ,ಸಿ.ಕೆ.ಪುರ, ಕನ್ನಮೇಡಿ,ಕುರುಬರ ಪಾಳ್ಯ.
ಈ ವೇಳೆ ಮುಗದಾಳೆ ಬೆಟ್ಟ ನರಸಿಂಯ್ಯ.ಜಯಶೀಲ್ ರೆಡ್ಡಿ.ಬಂಗಾರಪ್ಪ ಇತರರು ಪ್ರಚಾರದಲ್ಲಿ ತೊಡಗಿದರು.

ವರದಿ
ಪಾವಗಡ:ಇಮ್ರಾನ್ ಉಲ್ಲಾ