Document

ಪಾವಗಡ: 2023ನೇ ಸಾಲಿನ ವಿಧಾನಸಭಾ ಚುನಾವಣೆಯ ಮೊದಲ ನಾಮ ಪತ್ರ ಸಲ್ಲಿಕೆ.

Janataa24 NEWS DESK

ಪಾವಗಡ

IMG 20230413 WA0006




ಮೊದಲ ನಾಮ ಪತ್ರ ಕರ್ನಾಟಕ ರಾಷ್ಟ ಸಮಿತಿ ಪಕ್ಷದ ಅಭ್ಯರ್ಥಿ ಗೋವಿಂದಪ್ಪ ರವರಿಂದ ಸಲ್ಲಿಕೆ.

ಬೆಳಿಗ್ಗೆ 11-30ರ ವೇಳೆಗೆ ಗೋವಿಂದಪ್ಪ ತಮ್ಮ ಬೆಂಬಲ ರೊಂದಿಗೆ ಪಟ್ಟಣದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ತಾಲೂಕು ಕಚೇರಿಗೆ ಬಂದು ಚುನಾವಣೆ ಅಧಿಕಾರಿ ಅತೀಕ್ ಪಾಷ ರವರಿಗೆ ನಾಮ ಪಾತ್ರ ಸಲ್ಲಿಸಿದರು.

ಬೈಟ್ :-ನಂತರ ಮಾದ್ಯಮ ದೊಂದಿಗೆ ಮಾತನಾಡಿಯ ಕೆ.ಆರ್.ಎಸ್.ಅಭ್ಯರ್ಥಿ ಗೋವಿಂದಪ್ಪ ತಮ್ಮ ಅನಿಸಿಕೆ ಅಂಚಿಕೂಂಡಿದ್ದು ಹೀಗೆ.

ಇಂದು ಈ ಬಾರಿಯ ಚುನಾವಣೆಯ ಪ್ರಥಮ ನಾಮಪತ್ರ ಸಲ್ಲಿಕೆ ನಮ್ಮ ಕೆ.ಆರ್.ಎಸ್ ಪಕ್ಷದಿಂದ ಸಲ್ಲಿಸಿದ್ದೆವೆ.

IMG 20230413 WA0007



ಕೆ.ಆರ್.ಎಸ್.ಪಕ್ಷದಲ್ಲಿ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದ ನಮ್ಮ ಪಕ್ಷದ ವರಿಷ್ಠರಾದ ಕೃಷ್ಣರೆಡ್ಡಿ ಯವರಿಗೆ ಮೊದಲಿಗೆ ಧನ್ಯವಾದಗಳು.

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮೊದಲು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆ.

IMG 20230413 WA0005



ಉತ್ತಮ ಆಸ್ಪತ್ರೆಗಳು.ಶಿಕ್ಷಣಕ್ಕೆ ಆದ್ಯತೆ. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಮುಂದಾಗುತ್ತೇವೆ.

ರೈತರ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ನಮ್ಮ ಪಕ್ಷದ ಹಿರಿಯರು ಈ ಭಾಗದಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.


ವರದಿ

ಪಾವಗಡ:ಇಮ್ರಾನ್ ಉಲ್ಲಾ.

Document

Leave a Reply

Your email address will not be published. Required fields are marked *