ಪಾವಗಡ

ಪಾವಗಡ ಪಟ್ಟಣದ ಶ್ರೀನಿವಾಸ್ ನಗರದ ಚಲ್ಲಾ ಲಕ್ಮೀನಾರಯಣಪ್ಪ ಎಂಬುವರಿಗೆ ಸೇರಿದ ಅಪರ್ಮೇಂಟ್ ಗೆ ನುಗ್ಗಿದ ಮಳೆ ನೀರು.ಪಕ್ಕದಲ್ಲಿಯೇ
ಹಾದೂ ಹೋಗಿರುವ ರಾಜ ಕಾಲವೇ ಇದ್ದಕ್ಕೆ ಸೂಕ್ತ ನಿರ್ವಹಣೆ ಮಾಡದ ಪುರಸಭೆ ಅಧಿಕಾರಿಗಳು ಪಟ್ಟಣದ ಉದ್ದಕ್ಕೂ ರಾಜ ಕಾಲವೇ ಒತ್ತುವರಿ ಆಗಿರುವುದರಿಂದ ಪದೇ ಪದೇ ಮಳೆ ನೀರು ತುಂಬಿ ಅಕ್ಕ ಪಕ್ಕದ ಮನೆಗಳಿಗೆ ನೀರು ನುಗ್ಗುತ್ತಿದ್ದರು ಪುರಸಭೆ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ.

ಪಟ್ಟಣದ ಉದ್ದಕ್ಕೂ ರಾಜ ಕಾಲವೇ (ಡೂಳ್ಳರ ಹಳ್ಳ) ಹಾದೂ ಹೋಗಿದೆ ಅದನ್ನು ಸರಿಯಾದ ರೀತಿಯಲ್ಲಿ ನೀರು ಹರಿಯಲು ವ್ಯವಸ್ಥೆ ಇಲ್ಲದ ಕಾರಣ ಹೀಗೆ ಕೇವಲ ಒಂದು ತಾಸು ಬಂದಂತಹ ಮಳೆಗೆ ಕೆಲವೊಂದು ಮನೆಗಳಲ್ಲಿ ನೀರು ನುಗ್ಗುತ್ತಿದೆ.ಇನ್ನೂ ಸತತ ವಾಗಿ ಇನ್ನೂ ಹೆಚ್ಚುವರಿಯಾಗಿ ಮಳೆ ಬಂದರೆ ಹೇಗಿರಬಹುದು ಉಹಿಸಿಕೊಳ್ಳಲು ಸಾಧ್ಯವಿಲ್ಲ.

ಇದಕ್ಕೆ ಮೂಲ ಕಾರಣ ರಾಜ ಕಾಲುವೆಗಳಿಗೆ ಇಷ್ಟ ಬಂದಂತೆ ಸೇತುವೆ ಗಳು ನಿರ್ಮಾಣ ಒಂದು ಕಾರಣ ವಾಗಿದೆ.

ಸರ್ಕಾರದ ನಿಯಮಗಳ ಪ್ರಕಾರ ರಾಜ ಕಾಲುವೆಗಳಿಗೆ ಕಾಲ್ ದಾರಿ ಸೇತುವ ನಿರ್ಮಾಣ ಮಾಡ ಬಾರದು ಎಂಬ ಕಾನೂನು ಇದ್ದರು ಅಧಿಕಾರಿಗಳು ಕಾನೂನು ಗಾಳಿಗೆ ದೂರಿ ಸ್ವತಃ ಕಾಮಗಾರಿಯನ್ನು ಮಾಡಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ಇತ್ತ ಗಮನ ಹರಿಸಿ ಮುಂದೆ ಆಗುವಂತಹ ಅನಾಹುತಗಳನ್ನು ತಡೆಯಲು ಮುಂದಾಗಬೇಕಾಗಿದೆ.
ವರದಿ
ಪಾವಗಡ:ಇಮ್ರಾನ್ ಉಲ್ಲಾ.