Document

ನಿಯಂತ್ರಣ ತಪ್ಪಿ ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ತಲುಪಿಸಿದ ಮಧುಗಿರಿ ಕರವೇ ಅಧ್ಯಕ್ಷ ಶಿವಕುಮಾರ್

Janataa24 NEWS DESK

ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡ ವಾಹನ ಸವಾರ.




ಮಧುಗಿರಿ: ಚಲಿಸುತ್ತಿದ್ದ ದ್ವಿಚಕ್ರ ವಾಹನ ಏಕಾಏಕಿ ನಿಯಂತ್ರಣ ತಪ್ಪಿ ಸ್ಕಿಡ್ಆಗಿ ಬೈಕ್ ಸವಾರನು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

IMG 20231012 WA0018


ತಾಲೂಕಿನ ಮಡಿಗೇಶಿ ಹೋಬಳಿ ಮಿಡಿಗೇಶಿ ಗ್ರಾಮದ ವಾಸಿ ರಂಗಸ್ವಾಮಿ ರವರು ಬುಧವಾರ ತಾಲೂಕಿನ ಶ್ರಾವಣ ಹಳ್ಳಿ ಮುರಾರ್ಜಿ ದೇಸಾಯಿ ಶಾಲೆಯಿಂದ ಹಿಂದಿರುಗಿ ಮಧುಗಿರಿ ಕಡೆ ಬರುವಾಗ ದೊಡ್ಡ ಮಾಲೂರು ಕೆರೆ ಸಮೀಪದ ಇಳುಜಾರು ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್ಆಗಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳನ್ನು ಕೂಡಲೇ ಕರ್ನಾಟಕ ರಕ್ಷಣಾ ವೇದಿಕೆ ಮಧುಗಿರಿ ತಾಲೂಕು ಅಧ್ಯಕ್ಷ ಶಿವಕುಮಾರ್ ರವರು ಆಂಬುಲೆನ್ಸ್ ನಲ್ಲಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಗಾಯಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ ಪ್ರಕರಣ ಕೊಡಗಿನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

VideoCapture 20231012 202126

ವರದಿ

ಮಧುಗಿರಿ: ಅಬಿದ್

Document

Leave a Reply

Your email address will not be published. Required fields are marked *