ಮಟ್ಕ ಇಸ್ಪೀಟ್ ತ್ಯಜಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ: ಶಾಸಕ ಹೆಚ್.ವಿ.ವೆಂಕಟೇಶ್.

Janataa24 NEWS DESK

IMG 20240101 WA0016



ಪಾವಗಡ: ತಾಲ್ಲೂಕಿನ ವದನಕಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದ ಜನಸಂಪರ್ಕ ಸಭೆ ಉದ್ಘಾಟನೆ ಮಾಡಿ ಮಾತನಾಡಿ ಈ ಭಾಗದಲ್ಲಿ ಇಸ್ಪೀಟ್ ಜೂಜು ಅಡಿಸುವವರ ಡಾನ್ ಗಳು ಇದ್ದರೆ ಅವರ ಮೇಲೆ ಮೊದಲು ಕೊಂಡ ಕಾಯ್ದೆ ತೆರೆಯಲು ಪೋಲಿಸರಿಗೆ ಸೂಚನೆ ನೀಡಿದ್ದೆನೆ.



ಜನಸಂಪರ್ಕ ಸಭೆಯಲ್ಲಿ ಇಸ್ಪೀಟ್ ಧಂದೆಗಳ ಬಗ್ಗೆ ಚರ್ಚೆ.
ಹಲವು ಗ್ರಾಮಗಳ ಸಮಸ್ಯೆಗಳು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೆ ಪರಿಹಾರ ಮಾಡಿದರು.



ಲಿಂಗದಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಇಸ್ಪೀಟ್ ಮತ್ತು ಇತರೆ ಚಟುವಟಿಕೆಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ತೆಡೆಯುವಲ್ಲಿ ಈ ಭಾಗದ ಪೋಲೀಸರು ಹೆಚ್ಚು ಗಮನ ಹರಿಸುತ್ತಿದ್ದಾರೆ.

ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಾರ್ವಜನಿಕರ ಸಮಸ್ಯೆ ಹೆಚ್ಚಾಗಲು ಆ ಭಾಗದ ಕಂಪ್ಯೂಟರ್ ಅಪೆರೆಟರ್.ಬಿಲ್ಲು ಕಲೇಟರ್ ಗಳ ಹಾವಳಿಗಳಿಂದ ಹೆಚ್ಚಾಗಿದೆ ಎಂದರು.



ಹತ್ತು ಕೋಟಿ ಈಗಾಗಲೇ ಈ ಭಾಗದ ರಸ್ತೆಗಳಿಗೆ ಅನುದಾನಕ್ಕೆ ಪ್ರಸ್ತಾಪ ಮಾಡಲಾಗಿದೆ ಎಂದರು.
ಹಾಗೂ ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳಿಂದ ಹಲವು ಪಲಾನುಭವಿಗಳಿಗೆ ಜ ಹಲವು ರೀತಿಯ ಪ್ರಮಾಣಪತ್ರಗಳು, ಭಾಗ್ಯಲಕ್ಷ್ಮಿ ಬಾಂಡ್, ಜಾತಿ ಪ್ರಮಾಣ ಪತ್ರ, ಪುಸ್ತಕಗಳು, ಮಾಶಾಸನ ಪ್ರಮಾಣ ಪತ್ರಗಳು, ಮೇವಿನ ಬಿಜಗಳು, ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ವಿತರಣೆ ಮಾಡುವ ಪದಾರ್ಥಗಳನ್ನು ವಿತರಣೆ ಮಾಡಿದರು.



ನಂತರ ತಾಲೂಕಿನ ವದನಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗದಹಳ್ಳಿ ಗ್ರಾಮದಲ್ಲಿ ಸುಮಾರು 60 ಲಕ್ಷ ವೆಚ್ಚದಲ್ಲಿ ಸೊಲಾರ್ ಸಿ.ಎಸ್.ಆರ್ ಅನುದಾನ ನಿರ್ಮಾಣವಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಲೊಕರ್ಪಣೆ ಮಾಡಿದ ಶಾಸಕ.ಈ ವೇಳೆ ತಾಲ್ಲೂಕು ದಂಡಾಧಿಕಾರಿ ವರದರಾಜು ರವರು,ಕಾರ್ಯನಿರ್ವಹಣಾಧಿಕಾರಿ ಜಾನಕಿ ರಾಮ್ ರವರು, ಕೆಪಿಸಿಸಿ ಸದಸ್ಯ ಕೆ ಎಸ್ ಪಾಪಣ್ಣ ನವರು,
ಈ ವೇಳೆ ಹಲವು ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.



ವರದಿ

ಪಾವಗಡ:ಇಮ್ರಾನ್ ಉಲ್ಲಾ.

Leave a Reply

Your email address will not be published. Required fields are marked *