Mandya: ಮತದಾನದ ನಂತರ ಜೆಡಿಎಸ್ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ಸುಮಲತಾ ಅಂಬರೀಶ್.|

Janataa24 NEWS DESK

Mandya: ಮತದಾನದ ನಂತರ ಜೆಡಿಎಸ್ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ಸುಮಲತಾ ಅಂಬರೀಶ್.|After voting, Sumalata Ambarish expressed her displeasure with JDS.|

ಮಂಡ್ಯ: ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ(HD devegowda) ಹೇಳಿಕೆಯಿಂದ ನನಗೆ ಬಹಳಷ್ಟು ನೋವು ತಂದಿದೆ. ಜೆಡಿಎಸ್​(JDS)ನವರು ನನ್ನನ್ನು ಪ್ರಚಾರಕ್ಕೂ ಕರೆದಿಲ್ಲ ಎಂದು ಮತದಾನದ ನಂತರ ಸಂಸದೆ ಸುಮಲತಾ ಅವರು ಅಸಮಾಧಾನ ಹೊರಹಾಕಿದ್ದಾರೆ.

ದೊಡ್ಡರಸಿನಕೆರೆ ಗ್ರಾಮದಲ್ಲಿ ಸಂಸದೆ ಸುಮಲತಾ ಅಂಬರೀಶ್(Sumalatha Ambareesh) ಮಾತನಾಡಿ, ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು(HD Devegowdru) ಹಿರಿಯರು. ಅವರ ಬಗ್ಗೆ ನನಗೆ ಗೌರವ ಇದೆ. ಇನ್ನೊಂದು ರೀತಿ ಉತ್ತರ ಹೇಳೋಕೆ ಇಷ್ಟವಿಲ್ಲ. ಎಲ್ಲೋ ಅವರಿಗೆ ಸರಿಯಾದ ಮಾಹಿತಿ ಕೊಡದಿದ್ದಕ್ಕೆ ಈ ರೀತಿಯಾದ ಹೇಳಿಕೆ ಕೊಟ್ಟಿರಬಹುದು. ಖಂಡಿತ ಅವರಿಂದ ಇಂಥ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ.

ಕಳೆದ 5 ವರ್ಷದಲ್ಲಿ ನನ್ನ ಜವಾಬ್ದಾರಿಯನ್ನು ನಾನು ನಿಭಾಯಿಸಿಕೊಂಡು ಬಂದೆ. ನನಗೆ, ಅಂಬರೀಶ್ ಅವರಿಗೆ, ಬೆಂಬಲ, ಪಡೆ, ಶಕ್ತಿ ಈ ಜಿಲ್ಲೆಯಲ್ಲಿ ಇದ್ದೇ ಇದೆ ಎಂದು ಹೇಳಿದ್ದಾರೆ.ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವ ಮಹದಾಸೆ ನನ್ನದು ಏನೇ ಸಮಸ್ಯೆ ಇದ್ದರೂ ಮತ್ತೊಮ್ಮೆ ಮೋದಿಗಾಗಿ ಗೆದ್ದಂತಹ ಸ್ಥಾನವನ್ನು ತ್ಯಾಗ ಮಾಡಿದ್ದೇನೆ. ಅಂಬರೀಶ್ ಅವರ ಸೇನೆ ಹಾಗೂ ಬೆಂಬಲಿಗರು ನನ್ನ ಪ್ರಕಾರ ಬಿಜೆಪಿ(BJP), ಎನ್​ಡಿಎಗೆ ಸೇರಿದಂತೆ. ನನ್ನ ಜೊತೆಗಿದ್ದ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ.

ಇವತ್ತಿನ ದಿನದವರೆಗೆ ಜೆಡಿಎಸ್​(JDS) ಪಕ್ಷದ ನಾಯಕರು ಯಾವುದೇ ಸಭೆಗೆ ನನ್ನನ್ನು ಕರೆದಿಲ್ಲ. ಸಭೆಗೆ ಬಂದು ಜಾಯಿನ್ ಆಗಿ ಎಂದು ಕೇಳಿಲ್ಲ. ಜಿಲ್ಲೆಯ ಯಾವುದಾದ್ರೂ ತಾಲೂಕಿಗೆ, ಗ್ರಾಮಕ್ಕೆ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ. ಒಂದು ವೇಳೆ ಕರೆದರೂ ನಾನು ಬೇಡ ಅಂತ ಹೇಳಿದ್ದರೇ, ಅಂಥಹ ರೆಕಾರ್ಡ್​ ಇದ್ದರೇ ಕೊಡಿ ಅಂತ ಜೆಡಿಎಸ್​ನವರನ್ನ ಕೇಳಿ. ನೀವು ಇಲ್ಲದೇ ಎಲೆಕ್ಷನ್ ಮಾಡಬೇಕು ಎನ್ನುವುದು ಅವರಲ್ಲಿನ ಕೆಲವರಲ್ಲಿ ಇದ್ದಿದ್ದರಿಂದ ಈ ರೀತಿ ಮಾಡಿರಬಹುದು.

ನಮ್ಮ ಕಾರ್ಯಕರ್ತರನ್ನ ನಾನು ಸಮಾಧಾನ ಮಾಡಿಕೊಂಡು ಬಂದಿದ್ದೇನೆ. ನಮ್ಮವರಲ್ಲಿ ಕೆಲವರು ಫೋನ್ ಮಾಡಿ ನಮ್ಮ ವೋಟ್ ಅವರಿಗೆ ಲೆಕ್ಕಕ್ಕೆ ಇಲ್ವಾ ಅಂತ ಕೇಳಿದ್ದಾರೆ. ಪ್ರಚಾರಕ್ಕೆ ಬನ್ನಿ ಎಂದು ಯಾರೋಬ್ಬರು ಕರೆದಿಲ್ಲ ಎಂದು ಹೇಳಿದ್ದಾರೆ.

https://www.janataa24.com/fire-accident-coirr-factory-worth-more-than-one/

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

Leave a Reply

Your email address will not be published. Required fields are marked *